<p><strong>ಡೆಹ್ರಾಡೂನ್ : </strong>ಉತ್ತರಾಖಂಡದಲ್ಲಿನೀರ್ಗಲ್ಲುಕುಸಿತದಿಂದಉಂಟಾದಪ್ರವಾಹದಿಂದ ಎನ್ಟಿಪಿಸಿಯ 480 ಮೆಗಾವಾಟ್ ಸಾಮರ್ಥ್ಯದ ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜನೆಗೆ ₹1,500 ಕೋಟಿ ನಷ್ಟವಾಗಿದೆ. 2023ರಲ್ಲಿ ಈ ಘಟಕವು ಕಾರ್ಯಾರಂಭ ಮಾಡುವುದೇ ಎಂಬುದು ಪ್ರಶ್ನಾರ್ಥಕವಾಗಿದೆ ಎಂದು ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಸೋಮವಾರ ಹೇಳಿದ್ದಾರೆ.</p>.<p>ಯೋಜನಾ ಘಟಕಕ್ಕೆ ಆಗಿರುವ ಹಾನಿಯನ್ನು ಅಂದಾಜಿಸಲು ಸಚಿವರು ತೋಪವನಕ್ಕೆ ಭೇಟಿ ನೀಡಿದ್ದರು.</p>.<p>‘ಕಾಮಗಾರಿ ಮತ್ತೆ ಶುರುವಾಗುವುದು ಹಾಗೂ ಯೋಜನೆ ಕಾರ್ಯಾರಂಭ ಮಾಡುವುದು ಯಾವಾಗ ಎಂದು ಈಗಲೇ ಹೇಳಲಾಗದು. ಯೋಜನೆಯ ಸ್ಥಳದಲ್ಲಿ ಲಕ್ಷಾಂತರ ಟನ್ ಹೂಳು ಇರುವುದರಿಂದ ಘಟಕ ನಿರ್ವಿುಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ’ ಎಂದು ಹೇಳಿದರು. ಯೋಜನೆಯನ್ನು ರದ್ದುಗೊಳಿಸುವ ಸಾಧ್ಯತೆಯನ್ನು ಸಚಿವರು ತಳ್ಳಿಹಾಕಿದರು.</p>.<p class="Subhead">ವಿಎಚ್ಇಪಿ ಸ್ಥಗಿತ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹವನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕೆ ಕ್ರಮವಾಗಿ ಜೈಪ್ರಕಾಶ್ ಪವರ್ ವೆಂಚರ್ಸ್ ಲಿಮಿಟೆಡ್ (ಜೆಪಿವಿಎಲ್) ತನ್ನ ‘ವಿಷ್ಣುಪ್ರಯಾಗ ಹೈಡ್ರೊ ಎಲೆಕ್ಟ್ರಿಕ್ ಪ್ರಾಜೆಕ್ಟ್’ (ವಿಎಚ್ಇಪಿ) ಅನ್ನು ಸದ್ಯಕ್ಕೆ ಸ್ಥಗಿತಗೊಳಿಸಲಿದೆ.</p>.<p>ಅಲಕಾನಂದಾ ನದಿಯಲ್ಲಿ ಜೆಪಿವಿಎಲ್ ಸಂಸ್ಥೆಯು 400 ಮೆಗಾವಾಟ್ ಸಾಮರ್ಥ್ಯದ ವಿಷ್ಣುಪ್ರಯಾಗ ಹೈಡ್ರೊ ಎಲೆಕ್ಟ್ರಿಕ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿತ್ತು.</p>.<p class="Subhead">ರಕ್ಷಣಾ ಕಾರ್ಯಾಚರಣೆ ಚುರುಕು: ಜೋಶಿಮಠದ ಸಮೀಪದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸೇನೆ, ಐಟಿಬಿಪಿ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ರಕ್ಷಣಾ ಸಿಬ್ಬಂದಿ ರಾತ್ರಿಯಿಡೀ ಪರಿಹಾರ ಕೆಲಸದಲ್ಲಿ ತೊಡಗಿಕೊಂಡಿದ್ದರು. ವಾಯುಪಡೆಯೂ ಆಗಮಿಸಿವೆ.</p>.<p>27 ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ. ಈ ಪೈಕಿ 12 ಜನರನ್ನು ತಪೋವನ-ವಿಷ್ಣುಗಡ ಯೋಜನಾ ಸ್ಥಳದಲ್ಲಿ ಮತ್ತು 15 ಜನರನ್ನು ರಿಷಿ ಗಂಗಾ ತಾಣದಲ್ಲಿ ರಕ್ಷಿಸಲಾಗಿದೆ.</p>.<p>30-35 ಜನರು ತಪೋವನ-ವಿಷ್ಣುಗಡ ಯೋಜನೆಯ ಸುರಂಗದಲ್ಲಿ ಸಿಲುಕಿರುವ ಶಂಕೆ ಇದ್ದು, ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದ್ದಾರೆ.</p>.<p>ಸುರಂಗವು ಸ್ವಲ್ಪ ವಕ್ರವಾಗಿರುವುದರಿಂದ ಪರಿಹಾರ ಕೆಲಸ ಜಟಿಲವಾಗಿದೆ. ಕೊಳೆತಿರುವ ವಸ್ತುಗಳು, ಅವಶೇಷಗಳು ಮತ್ತು ಹೂಳು ತುಂಬಿರುವುದರಿಂದ ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.</p>.<p>30 ಕಾರ್ಮಿಕರು ಉತ್ತರ ಪ್ರದೇಶದವರು: ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದವರ ಪೈಕಿ ಉತ್ತರ ಪ್ರದೇಶದ ಲಖಿಂಪುರ ಖೇರಿಯ 30ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹ್ರಾಡೂನ್ : </strong>ಉತ್ತರಾಖಂಡದಲ್ಲಿನೀರ್ಗಲ್ಲುಕುಸಿತದಿಂದಉಂಟಾದಪ್ರವಾಹದಿಂದ ಎನ್ಟಿಪಿಸಿಯ 480 ಮೆಗಾವಾಟ್ ಸಾಮರ್ಥ್ಯದ ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜನೆಗೆ ₹1,500 ಕೋಟಿ ನಷ್ಟವಾಗಿದೆ. 2023ರಲ್ಲಿ ಈ ಘಟಕವು ಕಾರ್ಯಾರಂಭ ಮಾಡುವುದೇ ಎಂಬುದು ಪ್ರಶ್ನಾರ್ಥಕವಾಗಿದೆ ಎಂದು ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಸೋಮವಾರ ಹೇಳಿದ್ದಾರೆ.</p>.<p>ಯೋಜನಾ ಘಟಕಕ್ಕೆ ಆಗಿರುವ ಹಾನಿಯನ್ನು ಅಂದಾಜಿಸಲು ಸಚಿವರು ತೋಪವನಕ್ಕೆ ಭೇಟಿ ನೀಡಿದ್ದರು.</p>.<p>‘ಕಾಮಗಾರಿ ಮತ್ತೆ ಶುರುವಾಗುವುದು ಹಾಗೂ ಯೋಜನೆ ಕಾರ್ಯಾರಂಭ ಮಾಡುವುದು ಯಾವಾಗ ಎಂದು ಈಗಲೇ ಹೇಳಲಾಗದು. ಯೋಜನೆಯ ಸ್ಥಳದಲ್ಲಿ ಲಕ್ಷಾಂತರ ಟನ್ ಹೂಳು ಇರುವುದರಿಂದ ಘಟಕ ನಿರ್ವಿುಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ’ ಎಂದು ಹೇಳಿದರು. ಯೋಜನೆಯನ್ನು ರದ್ದುಗೊಳಿಸುವ ಸಾಧ್ಯತೆಯನ್ನು ಸಚಿವರು ತಳ್ಳಿಹಾಕಿದರು.</p>.<p class="Subhead">ವಿಎಚ್ಇಪಿ ಸ್ಥಗಿತ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹವನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕೆ ಕ್ರಮವಾಗಿ ಜೈಪ್ರಕಾಶ್ ಪವರ್ ವೆಂಚರ್ಸ್ ಲಿಮಿಟೆಡ್ (ಜೆಪಿವಿಎಲ್) ತನ್ನ ‘ವಿಷ್ಣುಪ್ರಯಾಗ ಹೈಡ್ರೊ ಎಲೆಕ್ಟ್ರಿಕ್ ಪ್ರಾಜೆಕ್ಟ್’ (ವಿಎಚ್ಇಪಿ) ಅನ್ನು ಸದ್ಯಕ್ಕೆ ಸ್ಥಗಿತಗೊಳಿಸಲಿದೆ.</p>.<p>ಅಲಕಾನಂದಾ ನದಿಯಲ್ಲಿ ಜೆಪಿವಿಎಲ್ ಸಂಸ್ಥೆಯು 400 ಮೆಗಾವಾಟ್ ಸಾಮರ್ಥ್ಯದ ವಿಷ್ಣುಪ್ರಯಾಗ ಹೈಡ್ರೊ ಎಲೆಕ್ಟ್ರಿಕ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿತ್ತು.</p>.<p class="Subhead">ರಕ್ಷಣಾ ಕಾರ್ಯಾಚರಣೆ ಚುರುಕು: ಜೋಶಿಮಠದ ಸಮೀಪದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸೇನೆ, ಐಟಿಬಿಪಿ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ರಕ್ಷಣಾ ಸಿಬ್ಬಂದಿ ರಾತ್ರಿಯಿಡೀ ಪರಿಹಾರ ಕೆಲಸದಲ್ಲಿ ತೊಡಗಿಕೊಂಡಿದ್ದರು. ವಾಯುಪಡೆಯೂ ಆಗಮಿಸಿವೆ.</p>.<p>27 ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ. ಈ ಪೈಕಿ 12 ಜನರನ್ನು ತಪೋವನ-ವಿಷ್ಣುಗಡ ಯೋಜನಾ ಸ್ಥಳದಲ್ಲಿ ಮತ್ತು 15 ಜನರನ್ನು ರಿಷಿ ಗಂಗಾ ತಾಣದಲ್ಲಿ ರಕ್ಷಿಸಲಾಗಿದೆ.</p>.<p>30-35 ಜನರು ತಪೋವನ-ವಿಷ್ಣುಗಡ ಯೋಜನೆಯ ಸುರಂಗದಲ್ಲಿ ಸಿಲುಕಿರುವ ಶಂಕೆ ಇದ್ದು, ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದ್ದಾರೆ.</p>.<p>ಸುರಂಗವು ಸ್ವಲ್ಪ ವಕ್ರವಾಗಿರುವುದರಿಂದ ಪರಿಹಾರ ಕೆಲಸ ಜಟಿಲವಾಗಿದೆ. ಕೊಳೆತಿರುವ ವಸ್ತುಗಳು, ಅವಶೇಷಗಳು ಮತ್ತು ಹೂಳು ತುಂಬಿರುವುದರಿಂದ ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.</p>.<p>30 ಕಾರ್ಮಿಕರು ಉತ್ತರ ಪ್ರದೇಶದವರು: ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದವರ ಪೈಕಿ ಉತ್ತರ ಪ್ರದೇಶದ ಲಖಿಂಪುರ ಖೇರಿಯ 30ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>