ನೇಪಾಳದಲ್ಲಿ ಭೂಕಂಪನದಿಂದ ತೀವ್ರ ಹಾನಿ ಉಂಟಾದ ಬಳಿಕ ಹಲವು ಪುನಶ್ಚೇತನ ಕಾರ್ಯಗಳಲ್ಲಿ ಭಾರತ ಕೈಜೋಡಿಸಿದೆ. ತರಾಯಿ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಿರ್ಮಿಸುತ್ತಿದೆ ಹಾಗೂ ರೈಲ್ವೆ ಮಾರ್ಗ, ಪೊಲೀಸ್ ತರಬೇತಿ ಅಕಾಡೆಮಿ, ಪಾಲಿಟೆಕ್ನಿಕ್ ಕಾಲೇಜು, ತೈಲ ಕೊಳವೆ ಮಾರ್ಗ ಹಾಗೂ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ಗಳ ಅಭಿವೃದ್ಧಿಗಾಗಿ ಭಾರತ ಸರ್ಕಾರ ₹800 ಕೋಟಿ ಮೀಸಲಿರಿಸಿದೆ.