ನವದೆಹಲಿ: ಪರಿಸರ ಪೂರ್ವಾನುಮತಿ (ಎನ್ವಿರಾನ್ಮೆಂಟ್ ಕ್ಲಿಯರ್–ಇಸಿ) ಇಲ್ಲದೇ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿರುವ ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್ಜಿಟಿ), ‘ಇಂಥ ವಿಚಾರಗಳಲ್ಲಿ ವಿನಾಯಿತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ‘ ಎಂದು ಸ್ಪಷ್ಟಪಡಿಸಿದೆ.
ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ಪೀಠ, ‘ಪರಿಸರ ಪೂರ್ವಾನುಮತಿ ಇಲ್ಲದೇ, ಪರಿಹಾರ ಪಾವತಿಯ ಆಧಾರದ ಮೇಲೆ ಕೈಗಾರಿಕೆಗಳ ಆರಂಭಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವಂತಿಲ್ಲ‘ ಎಂದು ಹೇಳಿದೆ.
‘ಪರಿಸರ ಪೂರ್ವಾನುಮತಿ ಶಾಸನಬದ್ಧ ಆದೇಶವಾಗಿದ್ದು, ಅದನ್ನು ಪಾಲಿಸಬೇಕೆಂದು ನಾವು ಅಭಿಪ್ರಾಯಪಟ್ಟಿದ್ದೇವೆ‘ ಎಂದು ನ್ಯಾಯಪೀಠ ಹೇಳಿದೆ.