<p><strong>ಮೊರೆನಾ:</strong> ಇದಕ್ಕೂ ಮೊದಲು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಮಲನಾಥ್ ಅವರು ಈಗಿನ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಮೇಲೆ ₹ 8 ಸಾವಿರ ಕೋಟಿ ಸಾಲ ಹೊರಿಸಿದ್ದಾರೆ ಎಂದು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಆರೋಪಿಸಿದ್ದಾರೆ.</p>.<p>15 ತಿಂಗಳು ಇದ್ದ ಈ ಹಿಂದಿನ ಸರ್ಕಾರವು, ಸಾಲಮನ್ನಾ ಮಾಡದೆ ರೈತರಿಗೂ ದ್ರೋಹ ಮಾಡಿದೆ ಎಂದು ಕಿಡಿ ಕಾರಿದ್ದಾರೆ.</p>.<p>ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಧಿಯಾ, ‘ಯಾರಾದರೂ ಜನರಿಗೆ ಮೋಸ ಮಾಡಿದವರು ಇದ್ದರೆ, ಅದು ಕಮಲನಾಥ್ ಮತ್ತು ದಿಗ್ವಿಜಯ್ ಸಿಂಗ್ ಮಾತ್ರ. ಅವರು ಅಧಿಕಾರದಲ್ಲಿದ್ದ15 ತಿಂಗಳಲ್ಲಿಯೂ ರೈತರ ಸಾಲ ಮನ್ನಾ ಮಾಡಲಿಲ್ಲ. ₹ 8 ಸಾವಿರ ಕೋಟಿ ಮೊತ್ತದ ಸಾಲದ ಹೊರೆಯನ್ನು ಶಿವರಾಜ್ ಸಿಂಗ್ ಸರ್ಕಾರದ ಮೇಲೆ ಹೇರಿದ್ದಾರೆ’ ಎಂದು ಹೇಳಿದ್ದಾರೆ.</p>.<p>ಇದೇವೇಳೆ ಮುಖ್ಯಮಂತ್ರಿ ಚೌಹಾಣ್ ಅವರು, ಒಂದು ರೂಪಾಯಿಗೆ1ಕೆಜಿ ಗೋಧಿ ಖರೀದಿಸಲು ಸಾಧ್ಯವಾಗದ ಯಾವುದೇ ಜಾತಿ ಅಥವಾ ಸಮುದಾಯದ ಬಡವರು ಸೆಪ್ಟೆಂಬರ್ 16ರಿಂದ 1 ರೂಪಾಯಿಗೆ ಒಂದು ಕೆಜಿಗೋಧಿ ಖರೀದಿಸಲಿದ್ದಾರೆ. ಇನ್ನುಮುಂದೆ ಯಾವೊಬ್ಬ ಬಡವರೂ ಹಸಿವಿನಿಂದ ಬಳಲುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊರೆನಾ:</strong> ಇದಕ್ಕೂ ಮೊದಲು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಮಲನಾಥ್ ಅವರು ಈಗಿನ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಮೇಲೆ ₹ 8 ಸಾವಿರ ಕೋಟಿ ಸಾಲ ಹೊರಿಸಿದ್ದಾರೆ ಎಂದು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಆರೋಪಿಸಿದ್ದಾರೆ.</p>.<p>15 ತಿಂಗಳು ಇದ್ದ ಈ ಹಿಂದಿನ ಸರ್ಕಾರವು, ಸಾಲಮನ್ನಾ ಮಾಡದೆ ರೈತರಿಗೂ ದ್ರೋಹ ಮಾಡಿದೆ ಎಂದು ಕಿಡಿ ಕಾರಿದ್ದಾರೆ.</p>.<p>ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಧಿಯಾ, ‘ಯಾರಾದರೂ ಜನರಿಗೆ ಮೋಸ ಮಾಡಿದವರು ಇದ್ದರೆ, ಅದು ಕಮಲನಾಥ್ ಮತ್ತು ದಿಗ್ವಿಜಯ್ ಸಿಂಗ್ ಮಾತ್ರ. ಅವರು ಅಧಿಕಾರದಲ್ಲಿದ್ದ15 ತಿಂಗಳಲ್ಲಿಯೂ ರೈತರ ಸಾಲ ಮನ್ನಾ ಮಾಡಲಿಲ್ಲ. ₹ 8 ಸಾವಿರ ಕೋಟಿ ಮೊತ್ತದ ಸಾಲದ ಹೊರೆಯನ್ನು ಶಿವರಾಜ್ ಸಿಂಗ್ ಸರ್ಕಾರದ ಮೇಲೆ ಹೇರಿದ್ದಾರೆ’ ಎಂದು ಹೇಳಿದ್ದಾರೆ.</p>.<p>ಇದೇವೇಳೆ ಮುಖ್ಯಮಂತ್ರಿ ಚೌಹಾಣ್ ಅವರು, ಒಂದು ರೂಪಾಯಿಗೆ1ಕೆಜಿ ಗೋಧಿ ಖರೀದಿಸಲು ಸಾಧ್ಯವಾಗದ ಯಾವುದೇ ಜಾತಿ ಅಥವಾ ಸಮುದಾಯದ ಬಡವರು ಸೆಪ್ಟೆಂಬರ್ 16ರಿಂದ 1 ರೂಪಾಯಿಗೆ ಒಂದು ಕೆಜಿಗೋಧಿ ಖರೀದಿಸಲಿದ್ದಾರೆ. ಇನ್ನುಮುಂದೆ ಯಾವೊಬ್ಬ ಬಡವರೂ ಹಸಿವಿನಿಂದ ಬಳಲುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>