ನವದೆಹಲಿ: ಭಾರತದ ಪ್ರಪ್ರಥಮ ಜಿಐಎಸ್ಎಟಿ–1 ಉಪಗ್ರಹದಉಡಾವಣೆ ಕಾರ್ಯವು ಕಳೆದ ಆಗಸ್ಟ್ತಿಂಗಳಲ್ಲಿ ವಿಫಲಗೊಳ್ಳಲು ರಾಕೆಟ್ನ ಘನೀಕೃತ ಜಲಜನಕ ಟ್ಯಾಂಕ್ನಲ್ಲಿ ಉಂಟಾಗಿದ್ದ ಕಡಿಮೆ ಒತ್ತಡ, ವಾಲ್ವ್ನಲ್ಲಿ ಕೊನೆಗಳಿಗೆಯಲ್ಲಿ ಕಾಣಿಸಿಕೊಂಡಿದ್ದ ದೋಷ ಕಾರಣ ಎಂದು ವರದಿ ತಿಳಿಸಿದೆ.
ಉಪಗ್ರಹ ಉಡಾವಣೆಯಲ್ಲಿ ವೈಫಲ್ಯ ಪತ್ತೆಗೆ ಸಮಿತಿಯನ್ನು‘ಇಸ್ರೊ’ ರಚಿಸಿತ್ತು. ಉಡಾವಣೆ ಸಂದರ್ಭದಲ್ಲಿ ವೇಳೆ ಜಿಎಸ್ಎಲ್ವಿ ರಾಕೆಟ್ನ ಕ್ರಯೊಜೆನಿಕ್ ಎಂಜಿನ್ನಲ್ಲಿ ವೈಫಲ್ಯ ಪತ್ತೆಯಾಗಿತ್ತು. ದೋಷ ಪತ್ತೆಯಾದ ನಂತರ ನಿಗದಿತ ವೇಳೆಯ 307 ಕ್ಷಣಗಳ ನಂತರ ಉಡಾವಣಾ ಪ್ರಕ್ರಿಯೆ ಕೈಬಿಡಲಾಗಿತ್ತು.