<p><strong>ನವದೆಹಲಿ:</strong> ಬೆಲೆ ಏರಿಕೆ, ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳಿಂದ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದ ಸಂಸತ್ನ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.</p>.<p>ಕೃಷಿ ಕಾನೂನುಗಳ ವಾಪಸ್ ಪಡೆಯುವ ಮಸೂದೆ, ಚುನಾವಣಾ ಕಾಯ್ದೆಗಳ ತಿದ್ದುಪಡಿ ಮಸೂದೆ ಸೇರಿದಂತೆ 9 ಮಸೂದೆಗಳನ್ನು ಪ್ರಸಕ್ತ ಅಧಿವೇಶನದಲ್ಲಿಯೇ ಅಂಗೀಕರಿಸಲಾಯಿತು.</p>.<p>ನವೆಂಬರ್ 29ರಂದು ಆರಂಭವಾಗಿದ್ದ ಅಧಿವೇಶನ ನಿಗದಿಯಂತೆ ಗುರುವಾರ (ಡಿ.23) ಮುಕ್ತಾಯಗೊಳ್ಳಬೇಕಿತ್ತು. ಆದರೆ, ಒಂದು ದಿನ ಮುಂಚಿತವಾಗಿಯೇ ಅಂತ್ಯಗೊಂಡಿತು.</p>.<p>ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಗಳಿಗೆ ನಿಗದಿ ಮಾಡುವ ಮಸೂದೆ, ಮಹಿಳೆಯ ಮದುವೆಯ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಳ ಮಾಡುವ ಮಸೂದೆ ಸೇರಿದಂತೆ ಒಟ್ಟು 12 ಮಸೂದೆಗಳನ್ನು ಸರ್ಕಾರ ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಿತ್ತು.</p>.<p>ಲೋಕಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ, ಸ್ಪೀಕರ್ ಓಂ ಬಿರ್ಲಾ ಅವರು ಸಮಾರೋಪ ಭಾಷಣ ಓದಿದರು.</p>.<p>‘ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಗಳಿಂದಾಗಿ ಕಲಾಪಕ್ಕೆ ಪದೇಪದೇ ಅಡ್ಡಿಯುಂಟಾಯಿತು. ಇದರಿಂದಾಗಿ ಅಮೂಲ್ಯವಾದ 18 ಗಂಟೆ, 48 ನಿಮಿಷಗಳಷ್ಟು ಅವಧಿ ನಷ್ಟವಾಯಿತು. ಲೋಕಸಭೆಯ ಕಲಾಪ ಒಟ್ಟಾರೆ ಶೇ 82ರಷ್ಟು ಫಲದಾಯಕವಾಗಿದೆ’ ಎಂದು ಸ್ಪೀಕರ್ ಬಿರ್ಲಾ ಹೇಳಿದರು.</p>.<p>ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಇತರ ಸಂಸದರು ಅಧಿವೇಶನದ ಕೊನೆಯ ದಿನದ ಕಲಾಪದಲ್ಲಿ ಪಾಲ್ಗೊಂಡಿದ್ದರು.</p>.<p class="Subhead"><strong>ರಾಜ್ಯಸಭೆ:</strong> ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ರಾಜ್ಯಸಭೆಯನ್ನು ಸಹ ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಿದರು.</p>.<p>‘ಪದೇಪದೇ ಉಂಟಾದ ಅಡ್ಡಿಗಳಿಂದಾಗಿ ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ರಾಜ್ಯಸಭೆಯ ಕಲಾಪ ನಡೆಯಿತು’ ಎಂದು ಅವರು ವಿಷಾದಿಸಿದರು.</p>.<p>‘ಪ್ರಸಕ್ತ ಅಧಿವೇಶನ ನಡೆದ ರೀತಿಯ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ. ಆದರೆ, ಈ ಅಧಿವೇಶನ ಇನ್ನಷ್ಟೂ ಉತ್ತಮವಾಗಿ ಹಾಗೂ ಭಿನ್ನವಾಗಿ ನಡೆಯಲು ಸಾಧ್ಯವಿತ್ತು. ಈ ಬಗ್ಗೆ ಪ್ರತಿಯೊಬ್ಬ ಸದಸ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ’ ಎಂದರು.</p>.<p><strong>ಜನರ ಧ್ವನಿಯಾಗುವಲ್ಲಿ ವಿಪಕ್ಷಗಳು ವಿಫಲ: ಬಿಜೆಪಿ<br />ನವದೆಹಲಿ</strong>: ‘ವಿರೋಧ ಪಕ್ಷಗಳು ಸಂಸತ್ನ ಪ್ರಸಕ್ತ ಚಳಿಗಾಲದ ಅಧಿವೇಶನದ ಕಲಾಪಕ್ಕೆ ಪದೇಪದೇ ಅಡ್ಡಿಪಡಿಸಿದವು. ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸದೇ ಅವರು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾದವು’ ಎಂದು ಬಿಜೆಪಿ ಬುಧವಾರ ಟೀಕಿಸಿದೆ.</p>.<p>‘ಮುಂಬರುವ ಚುನಾವಣೆಗಳಲ್ಲಿ ಸೋಲಿನ ಭೀತಿ ವಿರೋಧ ಪಕ್ಷಗಳನ್ನು ಕಾಡುತ್ತಿತ್ತು. ಈ ಕಾರಣಕ್ಕೆ ಅವು ಜನರನ್ನು ಬಾಧಿಸುತ್ತಿರುವ ವಿಷಯಗಳತ್ತ ಗಮನ ಹರಿಸಲಿಲ್ಲ’ ಎಂದು ಬಿಜೆಪಿಯ ಮುಖ್ಯ ವಕ್ತಾರರೂ ಆಗಿರುವ ರಾಜ್ಯಸಭಾ ಸದಸ್ಯ ಅನಿಲ್ ಬಲೂನಿ ಟೀಕಿಸಿದರು.</p>.<p><strong>ಅಯೋಧ್ಯೆ ಭೂಮಿ ಖರೀದಿ ವಿಷಯ ಪ್ರಸ್ತಾಪಕ್ಕೆ ಖರ್ಗೆ ಯತ್ನ<br />ನವದೆಹಲಿ:</strong> ರಾಮಮಂದಿರ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ ಅಯೋಧ್ಯೆಯಲ್ಲಿ ಕೆಲವು ರಾಜಕಾರಣಿಗಳು, ಅಧಿಕಾರಿಗಳು ಭೂಮಿ ಖರೀದಿಸಿದ್ದಾರೆ ಎಂಬ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಮುಂದಾದರು.</p>.<p>ಪತ್ರಿಕಾ ವರದಿಯನ್ನು ಉಲ್ಲೇಖಿಸಿದ ಅವರು, ‘ಶಾಸಕರು, ಮೇಯರ್, ಸ್ಥಳೀಯ ಸಂಸ್ಥೆಯ ಆಯುಕ್ತರು, ಅಧಿಕಾರಿಗಳು ಭೂಮಿ ಖರೀದಿಸಿದ್ದಾರೆ ಎಂಬುದನ್ನು ನೀವು ಗಮನಿಸಿರಬೇಕು’ ಎಂದು ಸಭಾಪತಿಯವರನ್ನು ಉದ್ದೇಶಿಸಿ ಹೇಳಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಎಂ.ವೆಂಕಯ್ಯನಾಯ್ಡು, ‘ವಿಷಯ ಪ್ರಸ್ತಾಪಕ್ಕೆ ಮೊದಲು ನೋಟಿಸ್ ನೀಡಬೇಕು. ಪತ್ರಿಕಾ ವರದಿಯನ್ನು ಕಲಾಪದಲ್ಲಿ ಓದಲು ಅವಕಾಶವಿಲ್ಲ’ ಎಂದರು.</p>.<p>ಈ ಹಂತದಲ್ಲಿ ಜೈರಾಂ ರಮೇಶ್, ಅಂಬಿಕಾ ಸೋನಿ, ಶಕ್ತಿಸಿನ್ಹಾ ಗೋಹಿ ಅವರು ಖರ್ಗೆ ಬೆಂಬಲಕ್ಕೆ ನಿಂತರು.ಆದರೆ, ವಿಷಯದ ಪ್ರಸ್ತಾಪಕ್ಕೆ ಸಭಾಪತಿಗಳು ಅನುಮತಿ ನೀಡಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಬೆಲೆ ಏರಿಕೆ, ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳಿಂದ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದ ಸಂಸತ್ನ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.</p>.<p>ಕೃಷಿ ಕಾನೂನುಗಳ ವಾಪಸ್ ಪಡೆಯುವ ಮಸೂದೆ, ಚುನಾವಣಾ ಕಾಯ್ದೆಗಳ ತಿದ್ದುಪಡಿ ಮಸೂದೆ ಸೇರಿದಂತೆ 9 ಮಸೂದೆಗಳನ್ನು ಪ್ರಸಕ್ತ ಅಧಿವೇಶನದಲ್ಲಿಯೇ ಅಂಗೀಕರಿಸಲಾಯಿತು.</p>.<p>ನವೆಂಬರ್ 29ರಂದು ಆರಂಭವಾಗಿದ್ದ ಅಧಿವೇಶನ ನಿಗದಿಯಂತೆ ಗುರುವಾರ (ಡಿ.23) ಮುಕ್ತಾಯಗೊಳ್ಳಬೇಕಿತ್ತು. ಆದರೆ, ಒಂದು ದಿನ ಮುಂಚಿತವಾಗಿಯೇ ಅಂತ್ಯಗೊಂಡಿತು.</p>.<p>ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಗಳಿಗೆ ನಿಗದಿ ಮಾಡುವ ಮಸೂದೆ, ಮಹಿಳೆಯ ಮದುವೆಯ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಳ ಮಾಡುವ ಮಸೂದೆ ಸೇರಿದಂತೆ ಒಟ್ಟು 12 ಮಸೂದೆಗಳನ್ನು ಸರ್ಕಾರ ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಿತ್ತು.</p>.<p>ಲೋಕಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ, ಸ್ಪೀಕರ್ ಓಂ ಬಿರ್ಲಾ ಅವರು ಸಮಾರೋಪ ಭಾಷಣ ಓದಿದರು.</p>.<p>‘ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಗಳಿಂದಾಗಿ ಕಲಾಪಕ್ಕೆ ಪದೇಪದೇ ಅಡ್ಡಿಯುಂಟಾಯಿತು. ಇದರಿಂದಾಗಿ ಅಮೂಲ್ಯವಾದ 18 ಗಂಟೆ, 48 ನಿಮಿಷಗಳಷ್ಟು ಅವಧಿ ನಷ್ಟವಾಯಿತು. ಲೋಕಸಭೆಯ ಕಲಾಪ ಒಟ್ಟಾರೆ ಶೇ 82ರಷ್ಟು ಫಲದಾಯಕವಾಗಿದೆ’ ಎಂದು ಸ್ಪೀಕರ್ ಬಿರ್ಲಾ ಹೇಳಿದರು.</p>.<p>ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಇತರ ಸಂಸದರು ಅಧಿವೇಶನದ ಕೊನೆಯ ದಿನದ ಕಲಾಪದಲ್ಲಿ ಪಾಲ್ಗೊಂಡಿದ್ದರು.</p>.<p class="Subhead"><strong>ರಾಜ್ಯಸಭೆ:</strong> ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ರಾಜ್ಯಸಭೆಯನ್ನು ಸಹ ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಿದರು.</p>.<p>‘ಪದೇಪದೇ ಉಂಟಾದ ಅಡ್ಡಿಗಳಿಂದಾಗಿ ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ರಾಜ್ಯಸಭೆಯ ಕಲಾಪ ನಡೆಯಿತು’ ಎಂದು ಅವರು ವಿಷಾದಿಸಿದರು.</p>.<p>‘ಪ್ರಸಕ್ತ ಅಧಿವೇಶನ ನಡೆದ ರೀತಿಯ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ. ಆದರೆ, ಈ ಅಧಿವೇಶನ ಇನ್ನಷ್ಟೂ ಉತ್ತಮವಾಗಿ ಹಾಗೂ ಭಿನ್ನವಾಗಿ ನಡೆಯಲು ಸಾಧ್ಯವಿತ್ತು. ಈ ಬಗ್ಗೆ ಪ್ರತಿಯೊಬ್ಬ ಸದಸ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ’ ಎಂದರು.</p>.<p><strong>ಜನರ ಧ್ವನಿಯಾಗುವಲ್ಲಿ ವಿಪಕ್ಷಗಳು ವಿಫಲ: ಬಿಜೆಪಿ<br />ನವದೆಹಲಿ</strong>: ‘ವಿರೋಧ ಪಕ್ಷಗಳು ಸಂಸತ್ನ ಪ್ರಸಕ್ತ ಚಳಿಗಾಲದ ಅಧಿವೇಶನದ ಕಲಾಪಕ್ಕೆ ಪದೇಪದೇ ಅಡ್ಡಿಪಡಿಸಿದವು. ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸದೇ ಅವರು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾದವು’ ಎಂದು ಬಿಜೆಪಿ ಬುಧವಾರ ಟೀಕಿಸಿದೆ.</p>.<p>‘ಮುಂಬರುವ ಚುನಾವಣೆಗಳಲ್ಲಿ ಸೋಲಿನ ಭೀತಿ ವಿರೋಧ ಪಕ್ಷಗಳನ್ನು ಕಾಡುತ್ತಿತ್ತು. ಈ ಕಾರಣಕ್ಕೆ ಅವು ಜನರನ್ನು ಬಾಧಿಸುತ್ತಿರುವ ವಿಷಯಗಳತ್ತ ಗಮನ ಹರಿಸಲಿಲ್ಲ’ ಎಂದು ಬಿಜೆಪಿಯ ಮುಖ್ಯ ವಕ್ತಾರರೂ ಆಗಿರುವ ರಾಜ್ಯಸಭಾ ಸದಸ್ಯ ಅನಿಲ್ ಬಲೂನಿ ಟೀಕಿಸಿದರು.</p>.<p><strong>ಅಯೋಧ್ಯೆ ಭೂಮಿ ಖರೀದಿ ವಿಷಯ ಪ್ರಸ್ತಾಪಕ್ಕೆ ಖರ್ಗೆ ಯತ್ನ<br />ನವದೆಹಲಿ:</strong> ರಾಮಮಂದಿರ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ ಅಯೋಧ್ಯೆಯಲ್ಲಿ ಕೆಲವು ರಾಜಕಾರಣಿಗಳು, ಅಧಿಕಾರಿಗಳು ಭೂಮಿ ಖರೀದಿಸಿದ್ದಾರೆ ಎಂಬ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಮುಂದಾದರು.</p>.<p>ಪತ್ರಿಕಾ ವರದಿಯನ್ನು ಉಲ್ಲೇಖಿಸಿದ ಅವರು, ‘ಶಾಸಕರು, ಮೇಯರ್, ಸ್ಥಳೀಯ ಸಂಸ್ಥೆಯ ಆಯುಕ್ತರು, ಅಧಿಕಾರಿಗಳು ಭೂಮಿ ಖರೀದಿಸಿದ್ದಾರೆ ಎಂಬುದನ್ನು ನೀವು ಗಮನಿಸಿರಬೇಕು’ ಎಂದು ಸಭಾಪತಿಯವರನ್ನು ಉದ್ದೇಶಿಸಿ ಹೇಳಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಎಂ.ವೆಂಕಯ್ಯನಾಯ್ಡು, ‘ವಿಷಯ ಪ್ರಸ್ತಾಪಕ್ಕೆ ಮೊದಲು ನೋಟಿಸ್ ನೀಡಬೇಕು. ಪತ್ರಿಕಾ ವರದಿಯನ್ನು ಕಲಾಪದಲ್ಲಿ ಓದಲು ಅವಕಾಶವಿಲ್ಲ’ ಎಂದರು.</p>.<p>ಈ ಹಂತದಲ್ಲಿ ಜೈರಾಂ ರಮೇಶ್, ಅಂಬಿಕಾ ಸೋನಿ, ಶಕ್ತಿಸಿನ್ಹಾ ಗೋಹಿ ಅವರು ಖರ್ಗೆ ಬೆಂಬಲಕ್ಕೆ ನಿಂತರು.ಆದರೆ, ವಿಷಯದ ಪ್ರಸ್ತಾಪಕ್ಕೆ ಸಭಾಪತಿಗಳು ಅನುಮತಿ ನೀಡಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>