ಸಾಹಿತ್ಯ ಅಕಾಡೆಮಿಯಲ್ಲಿ ನಡೆದ ಕಾರ್ಯಕಾರಿ ಚುನಾವಣೆಯಲ್ಲಿ ಕೌಶಿಕ್ ಅವರು ಕನ್ನಡದ ಹಿರಿಯ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಅವರನ್ನು ಸೋಲಿಸಿದರು. ಚುನಾ ವಣೆಯಲ್ಲಿ 99 ಸದಸ್ಯರು ಮತ ಚಲಾಯಿಸಿದರು. ಮಾಧವ ಕೌಶಿಕ್ ಪರವಾಗಿ 60 ಸದಸ್ಯರು, ಮಲ್ಲೇಪುರಂ ಪರವಾಗಿ 35 ಸದಸ್ಯರು ಮತ ಚಲಾಯಿಸಿದರು. ಕೌಶಿಕ್ ಅವರು ಈವರೆಗೆ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರಾಗಿದ್ದರು. ಕನ್ನಡದ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಈವರೆಗೆ ಅಧ್ಯಕ್ಷರಾಗಿದ್ದರು.