ಅಂತರರಾಷ್ಟ್ರೀಯ ವಿವಾದಗಳ ಬಗ್ಗೆ ಪ್ರಸ್ತಾಪಿಸಿದ ಅವರು, ‘ಪರಿಸರ ವಿಶ್ವಾಸ ವೃದ್ಧಿಸಲು ಅಂತರ
ರಾಷ್ಟ್ರೀಯ ಕಾನೂನುಗಳನ್ನು ಪಾಲಿಸಿ, ಶಾಂತಿಯುತವಾಗಿ ವಿವಾದಗಳನ್ನು ಪರಿಹರಿಸಿಕೊಳ್ಳಬೇಕು. ಬಾಂಗ್ಲಾ ದೇಶದ ಜತೆಗಿನ ಬಿಕ್ಕಟ್ಟನ್ನು ಭಾರತವು ಇದೇ ಸೂತ್ರದ ಅನ್ವಯ ಬಗೆಹರಿಸಿಕೊಂಡಿತು. ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಇಂತಹ ಕ್ರಮಗಳು ಅಗತ್ಯ’ ಎಂದು ವಿವರಿಸಿದರು.