<p><strong>ನವದೆಹಲಿ: </strong>ಕೃಷಿ ಕ್ಷೇತ್ರಕ್ಕೆ ಆಧುನಿಕತೆಯ ಅಗತ್ಯವಿದೆ ಎಂದು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಈಗಾಗಲೇ ಸಾಕಷ್ಟು ಸಮಯವೂ ಕಳೆದುಹೋಗಿದೆ ಎಂದಿದ್ದಾರೆ.</p>.<p>‘ಮನ್ ಕಿ ಬಾತ್’ ಕಾರ್ಯಕ್ರಮದ 75ನೇ ಸಂಚಿಕೆಯಲ್ಲಿ ಭಾನುವಾರ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಿದೆ. ಜೀವನದ ಹೊಸತನದ ಪ್ರತಿ ಹಂತದಲ್ಲೂ ಆಧುನೀಕರಣ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.</p>.<p>‘ಕೃಷಿ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು, ರೈತರ ಆದಾಯವನ್ನು ವೃದ್ಧಿಸಲು, ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಜೊತೆಗೆ ಹೊಸ ಪರ್ಯಾಯಗಳು, ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದು ಅಷ್ಟೇ ಮುಖ್ಯ’ ಎಂದು ಹೇಳಿದರು.</p>.<p>ಶ್ವೇತ ಕ್ರಾಂತಿಯ ಸಂದರ್ಭದಲ್ಲಿ ದೇಶವು ಇದಕ್ಕೆ ಸಾಕ್ಷಿಯಾಗಿದೆ ಮತ್ತು ಜೇನು ಸಾಕಾಣಿಕೆ ಕೂಡ ಒಂದು ಪರ್ಯಾಯವಾಗಿದೆ ಎಂದರು.</p>.<p>ಕೋವಿಡ್–19ರ ಪ್ರಸರಣವನ್ನು ತಗ್ಗಿಸಲು ಕಳೆದ ವರ್ಷದ ಮಾರ್ಚ್ನಲ್ಲಿ ದೇಶದ ಜನರು ಜನತಾ ಕರ್ಫ್ಯೂ ಬಗ್ಗೆ ಕೇಳಿದ್ದನ್ನು ಪ್ರಧಾನಿ ಈ ವೇಳೆ ಸ್ಮರಿಸಿದರು. ಮೊದಲಿನಿಂದಲೂ, ಭಾರತದ ಜನರು ಕೋವಿಡ್–19ರ ವಿರುದ್ಧ ಉತ್ಸಾಹಭರಿತ ಹೋರಾಟವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು. ಪ್ರಧಾನಿ ಮನವಿಯ ಮೇರೆಗೆ ಕಳೆದ ವರ್ಷದ ಮಾರ್ಚ್ 22 ರಂದು ಜನತಾ ಕರ್ಫ್ಯೂ ವಿಧಿಸಲಾಗಿತ್ತು.</p>.<p>‘ಕಳೆದ ವರ್ಷ ನಮ್ಮ ಬಳಿ ಏನೂ ಇರಲಿಲ್ಲ, ಜಾಗತಿಕವಾಗಿ ಲಸಿಕೆ ಯಾವಾಗ ಬರುತ್ತದೆಯೊ ಎಂಬ ಪ್ರಶ್ನೆ ಕಾಡುತ್ತಿತ್ತು. ಆದರೆ ಈಗ ಭಾರತವೇ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ನಡೆಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.</p>.<p>ಭಾರತದ 'ನಾರಿ ಶಕ್ತಿ' ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರ ಇತ್ತೀಚಿನ ಕ್ರೀಡಾ ಸಾಹಸಗಳನ್ನು ಶ್ಲಾಘಿಸಿದರು.</p>.<p>ಮನ್ ಕಿ ಬಾತ್ 75 ಸಂಚಿಕೆಯನ್ನು ಪೂರ್ಣಗೊಳಿಸುವಾಗ ಪ್ರಧಾನಿ ಅವರು, 2014ರಲ್ಲಿ ಆರಂಭವಾದ ಈ ಪ್ರಯಾಣ ನಿನ್ನೆಯಷ್ಟೇ ಆರಂಭವಾದಂತೆ ಭಾಸವಾಗುತ್ತಿದೆ. ಎಲ್ಲ ಕೇಳುಗರಿಗೆ ಧನ್ಯವಾದ ಎಂದು ಹೇಳಿದರು.</p>.<p>ಮನ್ ಕಿ ಬಾತ್ ಸಮಯದಲ್ಲಿ, ನಾವು ವ್ಯಾಪಕವಾದ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ವೈವಿಧ್ಯಮಯ ವಿಷಯಗಳನ್ನು ಒಳಗೊಂಡಂತೆ ತುಂಬಾ ಕಲಿತಿದ್ದೇವೆ ಎಂದರು.</p>.<p>ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ಮನ್ ಕಿ ಬಾತ್ 75ರ ಸಂಚಿಕೆ ಮುಗಿದಿದೆ. ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವು ನಾಗರಿಕನಾಗಿ ನಮ್ಮ ಕರ್ತವ್ಯಗಳ ಬಗ್ಗೆ ಯೋಚಿಸಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕೃಷಿ ಕ್ಷೇತ್ರಕ್ಕೆ ಆಧುನಿಕತೆಯ ಅಗತ್ಯವಿದೆ ಎಂದು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಈಗಾಗಲೇ ಸಾಕಷ್ಟು ಸಮಯವೂ ಕಳೆದುಹೋಗಿದೆ ಎಂದಿದ್ದಾರೆ.</p>.<p>‘ಮನ್ ಕಿ ಬಾತ್’ ಕಾರ್ಯಕ್ರಮದ 75ನೇ ಸಂಚಿಕೆಯಲ್ಲಿ ಭಾನುವಾರ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಿದೆ. ಜೀವನದ ಹೊಸತನದ ಪ್ರತಿ ಹಂತದಲ್ಲೂ ಆಧುನೀಕರಣ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.</p>.<p>‘ಕೃಷಿ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು, ರೈತರ ಆದಾಯವನ್ನು ವೃದ್ಧಿಸಲು, ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಜೊತೆಗೆ ಹೊಸ ಪರ್ಯಾಯಗಳು, ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದು ಅಷ್ಟೇ ಮುಖ್ಯ’ ಎಂದು ಹೇಳಿದರು.</p>.<p>ಶ್ವೇತ ಕ್ರಾಂತಿಯ ಸಂದರ್ಭದಲ್ಲಿ ದೇಶವು ಇದಕ್ಕೆ ಸಾಕ್ಷಿಯಾಗಿದೆ ಮತ್ತು ಜೇನು ಸಾಕಾಣಿಕೆ ಕೂಡ ಒಂದು ಪರ್ಯಾಯವಾಗಿದೆ ಎಂದರು.</p>.<p>ಕೋವಿಡ್–19ರ ಪ್ರಸರಣವನ್ನು ತಗ್ಗಿಸಲು ಕಳೆದ ವರ್ಷದ ಮಾರ್ಚ್ನಲ್ಲಿ ದೇಶದ ಜನರು ಜನತಾ ಕರ್ಫ್ಯೂ ಬಗ್ಗೆ ಕೇಳಿದ್ದನ್ನು ಪ್ರಧಾನಿ ಈ ವೇಳೆ ಸ್ಮರಿಸಿದರು. ಮೊದಲಿನಿಂದಲೂ, ಭಾರತದ ಜನರು ಕೋವಿಡ್–19ರ ವಿರುದ್ಧ ಉತ್ಸಾಹಭರಿತ ಹೋರಾಟವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು. ಪ್ರಧಾನಿ ಮನವಿಯ ಮೇರೆಗೆ ಕಳೆದ ವರ್ಷದ ಮಾರ್ಚ್ 22 ರಂದು ಜನತಾ ಕರ್ಫ್ಯೂ ವಿಧಿಸಲಾಗಿತ್ತು.</p>.<p>‘ಕಳೆದ ವರ್ಷ ನಮ್ಮ ಬಳಿ ಏನೂ ಇರಲಿಲ್ಲ, ಜಾಗತಿಕವಾಗಿ ಲಸಿಕೆ ಯಾವಾಗ ಬರುತ್ತದೆಯೊ ಎಂಬ ಪ್ರಶ್ನೆ ಕಾಡುತ್ತಿತ್ತು. ಆದರೆ ಈಗ ಭಾರತವೇ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ನಡೆಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.</p>.<p>ಭಾರತದ 'ನಾರಿ ಶಕ್ತಿ' ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರ ಇತ್ತೀಚಿನ ಕ್ರೀಡಾ ಸಾಹಸಗಳನ್ನು ಶ್ಲಾಘಿಸಿದರು.</p>.<p>ಮನ್ ಕಿ ಬಾತ್ 75 ಸಂಚಿಕೆಯನ್ನು ಪೂರ್ಣಗೊಳಿಸುವಾಗ ಪ್ರಧಾನಿ ಅವರು, 2014ರಲ್ಲಿ ಆರಂಭವಾದ ಈ ಪ್ರಯಾಣ ನಿನ್ನೆಯಷ್ಟೇ ಆರಂಭವಾದಂತೆ ಭಾಸವಾಗುತ್ತಿದೆ. ಎಲ್ಲ ಕೇಳುಗರಿಗೆ ಧನ್ಯವಾದ ಎಂದು ಹೇಳಿದರು.</p>.<p>ಮನ್ ಕಿ ಬಾತ್ ಸಮಯದಲ್ಲಿ, ನಾವು ವ್ಯಾಪಕವಾದ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ವೈವಿಧ್ಯಮಯ ವಿಷಯಗಳನ್ನು ಒಳಗೊಂಡಂತೆ ತುಂಬಾ ಕಲಿತಿದ್ದೇವೆ ಎಂದರು.</p>.<p>ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ಮನ್ ಕಿ ಬಾತ್ 75ರ ಸಂಚಿಕೆ ಮುಗಿದಿದೆ. ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವು ನಾಗರಿಕನಾಗಿ ನಮ್ಮ ಕರ್ತವ್ಯಗಳ ಬಗ್ಗೆ ಯೋಚಿಸಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>