ಪೂರ್ವ ಬರ್ಧಮಾನ್ ಜಿಲ್ಲೆಯ ಪುರ್ಬಸ್ತಾಲಿಯ ರ್ಯಾಲಿಯಲ್ಲಿ, ಮಮತಾ ಬ್ಯಾನರ್ಜಿ ಅವರ ‘ಬದಲಾವಣೆ’ ಘೋಷಣೆಯನ್ನು ಉಲ್ಲೇಖಿಸಿದ ಸುವೆಂದು, ‘ಬದಲಾವಣೆಗಾಗಿ ಬದಲಾವಣೆ’ ಅನ್ನುವ ಒಂದೇ ಕಾರಣಕ್ಕಾಗಿ ನಾನು ಬಿಜೆಪಿಗೆ ಸೇರ್ಪಡೆಗೊಂಡೆ. ನಾನು ಮೀರ್ ಜಾಫರನೂ ಅಲ್ಲ ದೇಶದ್ರೋಹಿಯೂ ಅಲ್ಲ. ಟಿಎಂಸಿ ಪಕ್ಷವು ಒಂದು ಗುಂಪಾಗಿ ಮಾರ್ಪಟ್ಟಿದೆಯಷ್ಟೇ. ಸ್ವಾಭಿಮಾನ ಇರುವ ಯಾರೇ ಆಗಲಿ ಅಲ್ಲಿರಲು ಸಾಧ್ಯವೇ ಇಲ್ಲ’ ಎಂದರು.