ಗುಪ್ತಚರ ಮೂಲಗಳಿಂದ ದೊರೆತಿರುವ ಮಾಹಿತಿ ಪ್ರಕಾರ, ಭಾರತದ ಮೇಲೆ ಯುದ್ಧ ಮಾಡಲು ಪಾಕಿಸ್ತಾನವು ಉಗ್ರರನ್ನು ಬಳಸಿಕೊಳ್ಳುತ್ತಿರುವುದು ಸಾಬೀತಾಗಿದೆ. ಉಗ್ರಗಾಮಿಗಳು ಭಾರತದೊಳಗೆ ನುಸುಳಲು ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಜಮ್ಮು ಪ್ರದೇಶದ ಅಂತರರಾಷ್ಟ್ರೀಯ ಗಡಿ ಸಮೀಪದ ಬಿಎಸ್ಎಫ್ ಪೋಸ್ಟ್ನ ಎದುರಲ್ಲಿಯೇ ಉಗ್ರರು ಬೀಡು ಬಿಟ್ಟಿರುವುದಕ್ಕೆ ದೃಶ್ಯಗಳ ಸಾಕ್ಷಿ ಇರುವುದಾಗಿ ತಿಳಿದು ಬಂದಿದೆ. ಈ ಕುರಿತು ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.