<p><strong>ನವದೆಹಲಿ:</strong> ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾದ ಬಳಿಕ ಮಗನಿಂದ ತನ್ನನ್ನು ಪ್ರತ್ಯೇಕಿಸಿಕೊಂಡ ಆರು ವರ್ಷದ ಬಾಲಕನ ತಾಯಿಯ ಧೈರ್ಯ ಮತ್ತು ಸಕಾರಾತ್ಮಕ ಚಿಂತನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.</p>.<p>ಗಾಜಿಯಾಬಾದ್ನ ಸೆಕ್ಟರ್ 6ರ ನಿವಾಸಿಯಾಗಿರುವ ಪೂಜಾ ವರ್ಮಾ ಮತ್ತು ಪತಿ ಗಗನ್ ಕೌಶಿಕ್ ಅವರಿಗೆ ಕೋವಿಡ್-19 ಸೋಂಕು ತಗುಲಿತ್ತು.</p>.<p>ಪೂಜಾ ವರ್ಮಾ, ಅವರ ಪತಿ ಮತ್ತು ಆರು ವರ್ಷದ ಮಗ ಮೂರು ಕೋಣೆಗಳುಳ್ಳ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಆದರೆ ಏಪ್ರಿಲ್ನಲ್ಲಿ ದಂಪತಿಗಳಿಬ್ಬರಿಗೂ ಕೋವಿಡ್-19 ಸೋಂಕು ತಗುಲಿದ ನಂತರ ಕಠಿಣ ನಿರ್ಧಾರವನ್ನು ತೆಗೆದುಕೊಂಡರು ಮತ್ತು ಮೂವರೂ ಪ್ರತ್ಯೇಕ ಕೋಣೆಗಳಲ್ಲಿ ಐಸೋಲೇಟ್ ಆಗಬೇಕೆಂದು ನಿರ್ಧರಿಸಿದರು.</p>.<p>'ಕೊರೊನಾ ವೈರಸ್ ಎಂದರೇನು ಅಥವಾ ಕೋವಿಡ್ ಸಂಬಂಧಿತ ನಿಯಮಗಳ ಅರ್ಥವೇನು ಮತ್ತು ಈ ಐಸೋಲೇಟ್ ಆಗುವ ಅವಶ್ಯಕತೆ ಏನೆಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ವಯಸ್ಸಿನಲ್ಲಿ ತನ್ನ ಹೆತ್ತವರ ಪ್ರೀತಿಗಾಗಿ ಹಾತೊರೆಯುತ್ತಿದ್ದ ಆರು ವರ್ಷದ ಮಗುವಿಗೆ ಇದು ಸುಲಭವಾಗಿರಲಿಲ್ಲ ಎಂದು ವರ್ಮಾ ಹೇಳಿದರು.</p>.<p>ಹೆತ್ತವರಿಂದ ದೂರವಾಗಿ ಪ್ರತ್ಯೇಕವಾದ ಕೋಣೆಯಲ್ಲಿ ಇರಲು ತಾನೇನು ತಪ್ಪು ಮಾಡಿದ್ದೇನೆ ಎಂದು ಆತ ಆಶ್ಚರ್ಯ ಪಡುತ್ತಿದ್ದ ಎಂದು ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ, ತನ್ನ ಮಗುವಿನಿಂದ ದೂರವಿರಬೇಕಾದ ಸಮಯ ಹೇಗಿತ್ತು ಎಂಬುದನ್ನು ಕವಿತೆಯ ಮೂಲಕ ವಿವರಿಸಿದ್ದಾರೆ.</p>.<p>ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಿ ಮೋದಿ ಅವರು ಪತ್ರ ಬರೆದಿದ್ದು, ಕುಟುಂಬದ ಯೋಗಕ್ಷೇಮ ವಿಚಾರಿಸಿದ್ದಾರೆ. 'ಕಷ್ಟದ ಸಂದರ್ಭದಲ್ಲಿಯೂ ಕೂಡ ನೀವು ಮತ್ತು ನಿಮ್ಮ ಕುಟುಂಬ ಧೈರ್ಯದಿಂದ ಕೋವಿಡ್ ನಿಯಮಗಳನ್ನು ಅನುಸರಿಸುವ ಮೂಲಕ ಈ ರೋಗದ ವಿರುದ್ಧ ಹೋರಾಡಿದ್ದಕ್ಕೆ ನನಗೆ ಸಂತೋಷವಾಗಿದೆ' ಎಂದು ಹೇಳಿದ್ದಾರೆ.</p>.<p>ಕಷ್ಟದ ಪರಿಸ್ಥಿತಿಯಲ್ಲಿ ತಾಳ್ಮೆ ಕಳೆದುಕೊಳ್ಳದಂತೆ ಮತ್ತು ಧೈರ್ಯವನ್ನು ಕಾಪಾಡಿಕೊಳ್ಳಲು ಶಾಸ್ತ್ರಗಳು ಕೂಡ ನಮಗೆ ಕಲಿಸಿವೆ ಎಂದ ಅವರು, ಮಹಿಳೆಯ ಕವಿತೆಯನ್ನು ಶ್ಲಾಘಿಸಿದ ಪ್ರಧಾನಿ, ತಾಯಿಯು ತನ್ನ ಮಗುವಿನಿಂದ ದೂರವಿರುವಾಗ ಉಂಟಾಗುವ ಆತಂಕವು ವ್ಯಕ್ತವಾಗಿದೆ ಎಂದಿದ್ದಾರೆ.</p>.<p>ಪೂಜಾ ವರ್ಮಾ ಅವರು, ತಮ್ಮ ಧೈರ್ಯ ಮತ್ತು ಸಕಾರಾತ್ಮಕ ಚಿಂತನೆಯಿಂದ ಮುನ್ನಡೆಯುತ್ತಾರೆ ಮತ್ತು ಜೀವನದಲ್ಲಿ ಬರುವ ಯಾವುದೇ ಸವಾಲನ್ನು ಕೂಡ ಯಶಸ್ವಿಯಾಗಿ ಎದುರಿಸುತ್ತಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>ದಂಪತಿಗಳೊಂದಿಗೆ ಸಂಪರ್ಕ ಮಾಡದಿದ್ದರಿಂದಾಗಿ ಪುತ್ರನಿಗೆ ಕೋವಿಡ್ ಸೋಂಕು ತಗುಲಿಲ್ಲ. ಸದ್ಯ ತಾನು ಮತ್ತು ಹೆಂಡತಿ ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ಕೌಶಿಕ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾದ ಬಳಿಕ ಮಗನಿಂದ ತನ್ನನ್ನು ಪ್ರತ್ಯೇಕಿಸಿಕೊಂಡ ಆರು ವರ್ಷದ ಬಾಲಕನ ತಾಯಿಯ ಧೈರ್ಯ ಮತ್ತು ಸಕಾರಾತ್ಮಕ ಚಿಂತನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.</p>.<p>ಗಾಜಿಯಾಬಾದ್ನ ಸೆಕ್ಟರ್ 6ರ ನಿವಾಸಿಯಾಗಿರುವ ಪೂಜಾ ವರ್ಮಾ ಮತ್ತು ಪತಿ ಗಗನ್ ಕೌಶಿಕ್ ಅವರಿಗೆ ಕೋವಿಡ್-19 ಸೋಂಕು ತಗುಲಿತ್ತು.</p>.<p>ಪೂಜಾ ವರ್ಮಾ, ಅವರ ಪತಿ ಮತ್ತು ಆರು ವರ್ಷದ ಮಗ ಮೂರು ಕೋಣೆಗಳುಳ್ಳ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಆದರೆ ಏಪ್ರಿಲ್ನಲ್ಲಿ ದಂಪತಿಗಳಿಬ್ಬರಿಗೂ ಕೋವಿಡ್-19 ಸೋಂಕು ತಗುಲಿದ ನಂತರ ಕಠಿಣ ನಿರ್ಧಾರವನ್ನು ತೆಗೆದುಕೊಂಡರು ಮತ್ತು ಮೂವರೂ ಪ್ರತ್ಯೇಕ ಕೋಣೆಗಳಲ್ಲಿ ಐಸೋಲೇಟ್ ಆಗಬೇಕೆಂದು ನಿರ್ಧರಿಸಿದರು.</p>.<p>'ಕೊರೊನಾ ವೈರಸ್ ಎಂದರೇನು ಅಥವಾ ಕೋವಿಡ್ ಸಂಬಂಧಿತ ನಿಯಮಗಳ ಅರ್ಥವೇನು ಮತ್ತು ಈ ಐಸೋಲೇಟ್ ಆಗುವ ಅವಶ್ಯಕತೆ ಏನೆಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ವಯಸ್ಸಿನಲ್ಲಿ ತನ್ನ ಹೆತ್ತವರ ಪ್ರೀತಿಗಾಗಿ ಹಾತೊರೆಯುತ್ತಿದ್ದ ಆರು ವರ್ಷದ ಮಗುವಿಗೆ ಇದು ಸುಲಭವಾಗಿರಲಿಲ್ಲ ಎಂದು ವರ್ಮಾ ಹೇಳಿದರು.</p>.<p>ಹೆತ್ತವರಿಂದ ದೂರವಾಗಿ ಪ್ರತ್ಯೇಕವಾದ ಕೋಣೆಯಲ್ಲಿ ಇರಲು ತಾನೇನು ತಪ್ಪು ಮಾಡಿದ್ದೇನೆ ಎಂದು ಆತ ಆಶ್ಚರ್ಯ ಪಡುತ್ತಿದ್ದ ಎಂದು ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ, ತನ್ನ ಮಗುವಿನಿಂದ ದೂರವಿರಬೇಕಾದ ಸಮಯ ಹೇಗಿತ್ತು ಎಂಬುದನ್ನು ಕವಿತೆಯ ಮೂಲಕ ವಿವರಿಸಿದ್ದಾರೆ.</p>.<p>ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಿ ಮೋದಿ ಅವರು ಪತ್ರ ಬರೆದಿದ್ದು, ಕುಟುಂಬದ ಯೋಗಕ್ಷೇಮ ವಿಚಾರಿಸಿದ್ದಾರೆ. 'ಕಷ್ಟದ ಸಂದರ್ಭದಲ್ಲಿಯೂ ಕೂಡ ನೀವು ಮತ್ತು ನಿಮ್ಮ ಕುಟುಂಬ ಧೈರ್ಯದಿಂದ ಕೋವಿಡ್ ನಿಯಮಗಳನ್ನು ಅನುಸರಿಸುವ ಮೂಲಕ ಈ ರೋಗದ ವಿರುದ್ಧ ಹೋರಾಡಿದ್ದಕ್ಕೆ ನನಗೆ ಸಂತೋಷವಾಗಿದೆ' ಎಂದು ಹೇಳಿದ್ದಾರೆ.</p>.<p>ಕಷ್ಟದ ಪರಿಸ್ಥಿತಿಯಲ್ಲಿ ತಾಳ್ಮೆ ಕಳೆದುಕೊಳ್ಳದಂತೆ ಮತ್ತು ಧೈರ್ಯವನ್ನು ಕಾಪಾಡಿಕೊಳ್ಳಲು ಶಾಸ್ತ್ರಗಳು ಕೂಡ ನಮಗೆ ಕಲಿಸಿವೆ ಎಂದ ಅವರು, ಮಹಿಳೆಯ ಕವಿತೆಯನ್ನು ಶ್ಲಾಘಿಸಿದ ಪ್ರಧಾನಿ, ತಾಯಿಯು ತನ್ನ ಮಗುವಿನಿಂದ ದೂರವಿರುವಾಗ ಉಂಟಾಗುವ ಆತಂಕವು ವ್ಯಕ್ತವಾಗಿದೆ ಎಂದಿದ್ದಾರೆ.</p>.<p>ಪೂಜಾ ವರ್ಮಾ ಅವರು, ತಮ್ಮ ಧೈರ್ಯ ಮತ್ತು ಸಕಾರಾತ್ಮಕ ಚಿಂತನೆಯಿಂದ ಮುನ್ನಡೆಯುತ್ತಾರೆ ಮತ್ತು ಜೀವನದಲ್ಲಿ ಬರುವ ಯಾವುದೇ ಸವಾಲನ್ನು ಕೂಡ ಯಶಸ್ವಿಯಾಗಿ ಎದುರಿಸುತ್ತಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>ದಂಪತಿಗಳೊಂದಿಗೆ ಸಂಪರ್ಕ ಮಾಡದಿದ್ದರಿಂದಾಗಿ ಪುತ್ರನಿಗೆ ಕೋವಿಡ್ ಸೋಂಕು ತಗುಲಿಲ್ಲ. ಸದ್ಯ ತಾನು ಮತ್ತು ಹೆಂಡತಿ ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ಕೌಶಿಕ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>