ಮುಂದುವರಿದು,ʼ2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾನು ಬಂಗಾಳಕ್ಕೆ ಬಂದಿದ್ದಾಗ, ಜನರು ರಾಮ ಮಂದಿರ ನಿರ್ಮಾಣ ಮಾಡುವುದು ಯಾವಾಗ? ಎಂದು ಕೇಳುತ್ತಿದ್ದರು. ಆ ಕೆಲಸ ಆಗುತ್ತದೆ.ಜನರು ಕಾಯಬೇಕು ಎಂದು ಹೇಳಿದ್ದೆ. 2020ರ ಆಗಸ್ಟ್5ರಂದು ಪ್ರಧಾನಿ ಮೋದಿ ಅವರು ರಾಮ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಾವು ಏನನ್ನು ಹೇಳುತ್ತೇವೆಯೋ, ಅದು ಆಗುವಂತೆ ಮಾಡುತ್ತೇವೆʼ ಎಂದು ಹೇಳಿದ್ದಾರೆ.