‘ಸಂಸ್ಥೆಯ ಪಾಲುದಾರರಾದ ರಾಘವೇಂದ್ರ ಶ್ರೀನಾಥ್, ಕೆ.ಪಿ.ನರಸಿಂಹಮೂರ್ತಿ, ಎಂ.ಪ್ರಹ್ಲಾದ್, ಕೆ.ಸಿ.ನಾಗರಾಜ್ ಹಾಗೂ ಸೂತ್ರಂ ಸುರೇಶ್ ಅವರು ಜನರಿಗೆ ವಂಚಿಸಿದ್ದಾರೆ. ವಿಕ್ರಮ್ ಇನ್ವೆಸ್ಟ್ಮೆಂಟ್ನಲ್ಲಿ ಹೂಡಿಕೆ ಮಾಡಿದರೆ, ಕಮಾಡಿಟಿ ಟ್ರೇಡಿಂಗ್ ಮಾಡಿ ಅಧಿಕ ಆದಾಯ ನೀಡುವ ಆಮಿಷ ಒಡ್ಡಿದ್ದರು. ಇದನ್ನು ನಂಬಿ ಸಾಕಷ್ಟು ಜನರು ಹೂಡಿಕೆ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.