‘ಒಬ್ಬ ಶಾಸಕರಿಗೆ ಒಂದೇ ಪಿಂಚಣಿ ಸಿಗಬೇಕೆನ್ನುವುದು ನಮ್ಮ ನಿರ್ಧಾರ. ಅನೇಕ ಶಾಸಕರು ಎರಡು ಬಾರಿ, ಐದು ಅಥವಾ ಹತ್ತು ಬಾರಿ ಗೆದ್ದವರಿರುತ್ತಾರೆ. ಅಂಥವರು ಪ್ರತಿ ಅವಧಿಗೂ ಪಿಂಚಣಿಯನ್ನು ಪಡೆಯುತ್ತಿದ್ದಾರೆ. ಇಂಥವರು ಕೆಲವರು ಸೋತಿರುತ್ತಾರೆ, ಇನ್ನೂ ಕೆಲವರು ಟಿಕೆಟ್ ಪಡೆಯಲೂ ಆಗದೇ ಮನೆಯಲ್ಲಿ ಕುಳಿತಿದ್ದರೂ ಲಕ್ಷಾಂತರ ರೂಪಾಯಿ ಪಿಂಚಣಿ ಪಡೆಯುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹೊರೆಯಾಗುತ್ತಿದೆ’ ಎಂದು ಭಗವಂತ ಮಾನ್ ಅವರು ಈ ಹಿಂದೆ ಹೇಳಿದ್ದರು.