'ಕೊಲಿಯಾರಿ ಗಾಂಧಿ' ಎಂದೇ ಪರಿಚಿತ ಮೋತಿಲಾಲ್ ತೇಜವತ್ ಅವರ ನೇತೃತ್ವದಲ್ಲಿ ಬುಡಕಟ್ಟು ಮಂದಿ ಹೋಳಿ ಹಬ್ಬಕ್ಕಿಂತ ಮೊದಲು, ಅಮಲ್ಕಿ ಏಕಾದಶಿ ದಿನ (ಮಾರ್ಚ್ 7, 1922) ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ನೆರೆದಿದ್ದರು. ಇದೇ ವೇಳೆ ಮೇವಾಡ್ ಭಿಲ್ ಕಾರ್ಪ್ಸ್ನ ಸೈನಿಕರು ಆಗಮಿಸಿದ್ದರು. ಮೇಜರ್ ಎಚ್ ಜಿ ಸ್ಯಾಟರ್ನ್ ಆದೇಶದಂತೆ ಅಮಾಯಕ ಬುಡಕಟ್ಟು ಜನರ ಮೇಲೆ ಗುಂಡಿನ ಮಳೆಗರೆದರು. ಈ ದುರ್ಘಟನೆಯಲ್ಲಿ ಸುಮಾರು 1,200 ಮಂದಿ ಕೊಲ್ಲಲ್ಪಟ್ಟರು' ಎಂದು ಗುಜರಾತ್ ಸರ್ಕಾರ ಮಾಹಿತಿ ನೀಡಿದೆ.