ಈರೋಡ್ (ತಮಿಳುನಾಡು): ಕರ್ನಾಟಕಕ್ಕೆ ವ್ಯಾನ್ವೊಂದರ ಮೂಲಕ ಕಳ್ಳಸಾಗಣೆ ಮಾಡಲಾಗುತ್ತಿದ್ದ 1.5 ಟನ್ಗಳಷ್ಟು ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಹಾರ ವಿಭಾಗದ ಅಧಿಕಾರಿಗಳು ಭಾನುವಾರ ತಿಳಿಸಿದರು.
‘ತಮಿಳುನಾಡು–ಕರ್ನಾಟಕ ಗಡಿಭಾಗದಲ್ಲಿರುವ ಬಾರ್ಗೂರ್ ಚೆಕ್ಪೋಸ್ಟ್ನಲ್ಲಿ ಪರಿಶೀಲನೆ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ವ್ಯಾನ್ ಚಾಲಕನನ್ನು ಬಂಧಿಸಲಾಗಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದು ಇಲ್ಲಿನ ಪಡಿತರ ಅಂಗಡಿಗೆ ಸೇರಿದ ಅಕ್ಕಿಯಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.