ಸ್ಪೀಕರ್ ರವೀಂದ್ರನಾಥ್ ಮಾತ್ಟೊ ಅವರು, ವಿಧಾನಸಭಾ ಕಟ್ಟಡದ 348 ಸಂಖ್ಯೆಯ ಕೊಠಡಿಯನ್ನು ನಮಾಜ್ ಮಾಡುವುದಕ್ಕಾಗಿ ಮೀಸಲಿಟ್ಟು ಆದೇಶ ಹೊರಡಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ವಿಧಾನಸಭೆಯ ಆವರಣದಲ್ಲಿ ಹನುಮಾನ್ ಮಂದಿರವನ್ನು ನಿರ್ಮಿಸಿ, ಪ್ರಾರ್ಥನೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು.