ಠಾಕೂರ್ ಕಳೆದ ವರ್ಷವೂ ತಾಜ್ಮಹಲ್ ಒಳಗೆ ಕೇಸರಿ ಧ್ವಜವನ್ನು ಹಾರಿಸಿ, ಶಿವ ಚಾಲೀಸ ಪಠಿಸಿದ್ದರು. ಸಂಘಟನೆಯ ಕಾರ್ಯಕರ್ತರು ಜಲಾಭಿಷೇಕ ನಡೆಸಲೂ ಪ್ರಯತ್ನಿಸಿದ್ದರು. ‘ತಾಜ್ಮಹಲ್ ಇದ್ದ ಸ್ಥಳದಲ್ಲಿ ಶಿವಮಂದಿರವಿತ್ತು. ಷಹಜಹಾನ್ ಇದನ್ನು ಧ್ವಂಸ ಮಾಡಿ, ಮಸೀದಿ ಕಟ್ಟಿದ್ದರು. ನಮಗೆ ಇದು ಶಿವಮಂದಿರ. ನಾವು ಮೊದಲೂ ಇಲ್ಲಿ ಪೂಜೆಯನ್ನು ಮಾಡಿದ್ದೇವೆ’ ಎಂದು ಠಾಕೂರ್ ಪ್ರತಿಪಾದಿಸಿದರು.