ಕಾಲೇಜಿನ ಮೂಲಕ ನಡೆದ ಖಾಸಗಿ ಕೌನ್ಸೆಲಿಂಗ್ಗೆ ಮಾನ್ಯತೆ ಇಲ್ಲ ಎಂಬುದರ ಅರಿವಿದ್ದೂ ಈ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ ಸೇರಿದ್ದು, ಹಿಂಬಾಗಿನಿಂದ ಪ್ರವೇಶ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಎಂಸಿಐ ಹಾಗೂ ಉತ್ತರಪ್ರದೇಶ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.ಅವರ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರಾವ್, ಬಿ.ಆರ್.ಗವಾಯಿ ಹಾಘೂ ಕೃಷ್ಣ ಮುರಾರಿ ಅವರನ್ನು ಒಳಗೊಂಡ ನ್ಯಾಯಪೀಠವು, ‘ಕಾನೂನು ಬಾಹಿರ ಕ್ರಮ ಎಂದು ಗೊತ್ತಿದ್ದರೂ, ಎಂಸಿಐ ಪ್ರವೇಶಾತಿ ಅನೂರ್ಜಿತಗೊಳಿಸಿದ ಮೇಲೂ ಈ ವಿದ್ಯಾರ್ಥಿಗಳು ಮೊದಲೆರಡು ವರ್ಷದ ಪರೀಕ್ಷೆ ಹೇಗೆ ಬರೆದರು?’ ಎಂದು ಅಚ್ಚರಿ ವ್ಯಕ್ತಪಡಿಸಿತು.