<p class="title"><strong>ನವದೆಹಲಿ</strong>: ‘ಒಂದು ಶ್ರೇಣಿ, ಒಂದು ಪಿಂಚಣಿ’ (ಒಆರ್ಒಪಿ) ಯೋಜನೆಗೆ ಸಂಬಂಧಿಸಿದಂತೆ 2022ರ ತೀರ್ಪಿಗೆ ಕೇಂದ್ರ ಸರ್ಕಾರ ಬದ್ಧವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ತಾಕೀತು ಮಾಡಿತು.</p>.<p class="title">ಅಲ್ಲದೆ, ಸೇನೆಯ ನಿವೃತ್ತ ಸಿಬ್ಬಂದಿಗೆ ನೀಡಬೇಕಿರುವ 2019–22ನೇ ಅವಧಿಯ ಬಾಕಿಯ ಒಟ್ಟು ಮೊತ್ತ ₹ 28,000 ಕೋಟಿಯನ್ನು 2024ರ ಫೆಬ್ರುವರಿ 28ರ ಒಳಗೆ ಪಾವತಿಸಬೇಕು ಎಂದೂ ಗಡುವು ನಿಗದಿಪಡಿಸಿತು.</p>.<p class="title">ಮುಖ್ಯ ನ್ಯಾಯಮೂರ್ತಿ ಡಿ.ವೈಚಂದ್ರಚೂಡ್ ನೇತೃತ್ವದ ಪೀಠವು, ಒಆರ್ಒಪಿ ಬಾಕಿ ಪಾವತಿಗೆ ಸಂಬಂಧಿಸಿ ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಸರ್ಕಾರವು ನೀಡಿದ್ದ ವಿವರಣೆಯನ್ನು ಸ್ವೀಕರಿಸಲು ನಿರಾಕರಿಸಿತು.</p>.<p class="title">ಸೇನೆಯ ವಿವಿಧ ಹಂತದ, ಮಾಜಿ ಸಿಬ್ಬಂದಿಗೆ ನೀಡಬೇಕಾಗಿರುವ ಬಾಕಿ ಉಳಿದಿರುವ ಮೊತ್ತವನ್ನು ವಿತರಿಸಲು ಕಾಲಮಿತಿಯನ್ನು ಪೀಠವು ನಿಗದಿಪಡಿಸಿತು.</p>.<p>ಒಆರ್ಒಪಿ ಯೋಜನೆಯ ನಿಯಮಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿರುವ ತೀರ್ಪಿಗೆ ಬದ್ಧವಾಗಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದೂ ಸ್ಪಷ್ಟಪಡಿಸಿತು.</p>.<p>ಒಟ್ಟು 25 ಲಕ್ಷ ಪಿಂಚಣಿದಾರರಿದ್ದು, ಹೆಚ್ಚುವರಿ ಪಿಂಚಣಿ ಪಡೆಯುತ್ತಿರುವ 4 ಲಕ್ಷ ಜನರು ಇದರ ವ್ಯಾಪ್ತಿಗೆ ಬರುವುದಿಲ್ಲ. ಬಾಕಿಯನ್ನು ಕೇಂದ್ರವು ಏ.30, 2023ರ ಒಳಗೆ ಪಾವತಿಸಬೇಕು ಎಂದು ಸುಪ್ರಿಂ ಕೋರ್ಟ್ ಈ ಹಿಂದೆ ಆದೇಶಿಸಿತು. ಈಗ ಬಾಕಿ ಪಾವತಿಗೆ 2024ರ ಫೆಬ್ರುವರಿ 28ಕ್ಕೆ ಗಡುವು ನಿಗದಿಪಡಿಸಿದೆ.</p>.<p>ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲಾ ಪೀಠದ ಇತರ ಸದಸ್ಯರು. ಆರು ಲಕ್ಷ ಪಿಂಚಣಿದಾರರ ಕುಟುಂಬಗಳು ಮತ್ತು ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ನೀಡಬೇಕಿರುವ ಬಾಕಿಯನ್ನು ಏಪ್ರಿಲ್ 30, 2023ರ ಒಳಗೆ ಪಾವತಿಸಬೇಕು ಎಂದು ಪೀಠವು ತಾಕೀತು ಮಾಡಿತು.</p>.<p>70 ವರ್ಷ ಅಥವಾ ಆ ವಯಸ್ಸು ಮೀರಿರುವ ನಾಲ್ಕರಿಂದ ಐದು ಲಕ್ಷ ಪಿಂಚಣಿದಾರರಿಗೆ ನೀಡಬೇಕಿರುವ ಬಾಕಿ ಮೊತ್ತವನ್ನು ಒಂದು ಅಥವಾ ಹೆಚ್ಚಿನ ಕಂತುಗಳಲ್ಲಿ ಜೂನ್ 30ರ ಒಳಗೆ ಪಾವತಿಸಬೇಕು. </p>.<p>ಇನ್ನುಳಿದ 10–11 ಲಕ್ಷ ಪಿಂಚಣಿದಾರರಿಗೆ ಬಾಕಿಯನ್ನು ಮೂರು ಸಮಾನ ಕಂತುಗಳಲ್ಲಿ ಮುಂದಿನ ವರ್ಷ ಫೆಬ್ರುವರಿ 28ರ ಒಳಗೆ ಪಾವತಿಸಬಹುದು ಎಂದು ಪೀಠವು ಗಡುವು ನಿಗದಿಪಡಿಸಿತು. </p>.<p><strong>‘ಮುಚ್ಚಿದ ಲಕೋಟೆ ವ್ಯವಸ್ಥೆ ಸರಿಯಲ್ಲ’</strong></p>.<p>ನವದೆಹಲಿ (ಪಿಟಿಐ): ಬಾಕಿ ಕುರಿತಂತೆ ಕೇಂದ್ರ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ವಿವರಣೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ನ ಪೀಠವು ಖಡಾಖಂಡಿತವಾಗಿ ನಿರಾಕರಿಸಿತು.</p>.<p>ಸುಪ್ರೀಂ ಕೋರ್ಟ್ನಲ್ಲಿ ಇಂತಹ ಮುಚ್ಚಿದ ಲಕೋಟೆಯ ಅಭ್ಯಾಸಕ್ಕೆ ಅಂತ್ಯ ಹಾಡಬೇಕಾಗಿದೆ. ಇದು, ನ್ಯಾಯಯುತ ನ್ಯಾಯ ಪ್ರಕ್ರಿಯೆಗೆ ಮೂಲಭೂತವಾಗಿ ವಿರುದ್ಧವಾಗಿರುವ ವ್ಯವಸ್ಥೆ ಎಂದು ಪೀಠ ಹೇಳಿತು.</p>.<p>‘ಮುಚ್ಚಿದ ಲಕೋಟೆ ಸ್ವೀಕರಿಸುವ ವ್ಯವಸ್ಥೆಗೆ ವೈಯಕ್ತಿಕವಾಗಿ ನಾನು ವಿರೊಧವಿದ್ದೇನೆ. ಕೋರ್ಟ್ನಲ್ಲಿ ಪಾರದರ್ಶಕತೆ ಇರಬೇಕು. ಆದೇಶ ನೀಡುವ ಪ್ರಕ್ರಿಯೆಯಲ್ಲಿ ಗೋಪ್ಯ ಕಾಪಾಡುವುದು ಏನಿದೆ?’ ಎಂದು ಮುಖ್ಯನ್ಯಾಯಮೂರ್ತಿ ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: ‘ಒಂದು ಶ್ರೇಣಿ, ಒಂದು ಪಿಂಚಣಿ’ (ಒಆರ್ಒಪಿ) ಯೋಜನೆಗೆ ಸಂಬಂಧಿಸಿದಂತೆ 2022ರ ತೀರ್ಪಿಗೆ ಕೇಂದ್ರ ಸರ್ಕಾರ ಬದ್ಧವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ತಾಕೀತು ಮಾಡಿತು.</p>.<p class="title">ಅಲ್ಲದೆ, ಸೇನೆಯ ನಿವೃತ್ತ ಸಿಬ್ಬಂದಿಗೆ ನೀಡಬೇಕಿರುವ 2019–22ನೇ ಅವಧಿಯ ಬಾಕಿಯ ಒಟ್ಟು ಮೊತ್ತ ₹ 28,000 ಕೋಟಿಯನ್ನು 2024ರ ಫೆಬ್ರುವರಿ 28ರ ಒಳಗೆ ಪಾವತಿಸಬೇಕು ಎಂದೂ ಗಡುವು ನಿಗದಿಪಡಿಸಿತು.</p>.<p class="title">ಮುಖ್ಯ ನ್ಯಾಯಮೂರ್ತಿ ಡಿ.ವೈಚಂದ್ರಚೂಡ್ ನೇತೃತ್ವದ ಪೀಠವು, ಒಆರ್ಒಪಿ ಬಾಕಿ ಪಾವತಿಗೆ ಸಂಬಂಧಿಸಿ ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಸರ್ಕಾರವು ನೀಡಿದ್ದ ವಿವರಣೆಯನ್ನು ಸ್ವೀಕರಿಸಲು ನಿರಾಕರಿಸಿತು.</p>.<p class="title">ಸೇನೆಯ ವಿವಿಧ ಹಂತದ, ಮಾಜಿ ಸಿಬ್ಬಂದಿಗೆ ನೀಡಬೇಕಾಗಿರುವ ಬಾಕಿ ಉಳಿದಿರುವ ಮೊತ್ತವನ್ನು ವಿತರಿಸಲು ಕಾಲಮಿತಿಯನ್ನು ಪೀಠವು ನಿಗದಿಪಡಿಸಿತು.</p>.<p>ಒಆರ್ಒಪಿ ಯೋಜನೆಯ ನಿಯಮಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿರುವ ತೀರ್ಪಿಗೆ ಬದ್ಧವಾಗಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದೂ ಸ್ಪಷ್ಟಪಡಿಸಿತು.</p>.<p>ಒಟ್ಟು 25 ಲಕ್ಷ ಪಿಂಚಣಿದಾರರಿದ್ದು, ಹೆಚ್ಚುವರಿ ಪಿಂಚಣಿ ಪಡೆಯುತ್ತಿರುವ 4 ಲಕ್ಷ ಜನರು ಇದರ ವ್ಯಾಪ್ತಿಗೆ ಬರುವುದಿಲ್ಲ. ಬಾಕಿಯನ್ನು ಕೇಂದ್ರವು ಏ.30, 2023ರ ಒಳಗೆ ಪಾವತಿಸಬೇಕು ಎಂದು ಸುಪ್ರಿಂ ಕೋರ್ಟ್ ಈ ಹಿಂದೆ ಆದೇಶಿಸಿತು. ಈಗ ಬಾಕಿ ಪಾವತಿಗೆ 2024ರ ಫೆಬ್ರುವರಿ 28ಕ್ಕೆ ಗಡುವು ನಿಗದಿಪಡಿಸಿದೆ.</p>.<p>ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲಾ ಪೀಠದ ಇತರ ಸದಸ್ಯರು. ಆರು ಲಕ್ಷ ಪಿಂಚಣಿದಾರರ ಕುಟುಂಬಗಳು ಮತ್ತು ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ನೀಡಬೇಕಿರುವ ಬಾಕಿಯನ್ನು ಏಪ್ರಿಲ್ 30, 2023ರ ಒಳಗೆ ಪಾವತಿಸಬೇಕು ಎಂದು ಪೀಠವು ತಾಕೀತು ಮಾಡಿತು.</p>.<p>70 ವರ್ಷ ಅಥವಾ ಆ ವಯಸ್ಸು ಮೀರಿರುವ ನಾಲ್ಕರಿಂದ ಐದು ಲಕ್ಷ ಪಿಂಚಣಿದಾರರಿಗೆ ನೀಡಬೇಕಿರುವ ಬಾಕಿ ಮೊತ್ತವನ್ನು ಒಂದು ಅಥವಾ ಹೆಚ್ಚಿನ ಕಂತುಗಳಲ್ಲಿ ಜೂನ್ 30ರ ಒಳಗೆ ಪಾವತಿಸಬೇಕು. </p>.<p>ಇನ್ನುಳಿದ 10–11 ಲಕ್ಷ ಪಿಂಚಣಿದಾರರಿಗೆ ಬಾಕಿಯನ್ನು ಮೂರು ಸಮಾನ ಕಂತುಗಳಲ್ಲಿ ಮುಂದಿನ ವರ್ಷ ಫೆಬ್ರುವರಿ 28ರ ಒಳಗೆ ಪಾವತಿಸಬಹುದು ಎಂದು ಪೀಠವು ಗಡುವು ನಿಗದಿಪಡಿಸಿತು. </p>.<p><strong>‘ಮುಚ್ಚಿದ ಲಕೋಟೆ ವ್ಯವಸ್ಥೆ ಸರಿಯಲ್ಲ’</strong></p>.<p>ನವದೆಹಲಿ (ಪಿಟಿಐ): ಬಾಕಿ ಕುರಿತಂತೆ ಕೇಂದ್ರ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ವಿವರಣೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ನ ಪೀಠವು ಖಡಾಖಂಡಿತವಾಗಿ ನಿರಾಕರಿಸಿತು.</p>.<p>ಸುಪ್ರೀಂ ಕೋರ್ಟ್ನಲ್ಲಿ ಇಂತಹ ಮುಚ್ಚಿದ ಲಕೋಟೆಯ ಅಭ್ಯಾಸಕ್ಕೆ ಅಂತ್ಯ ಹಾಡಬೇಕಾಗಿದೆ. ಇದು, ನ್ಯಾಯಯುತ ನ್ಯಾಯ ಪ್ರಕ್ರಿಯೆಗೆ ಮೂಲಭೂತವಾಗಿ ವಿರುದ್ಧವಾಗಿರುವ ವ್ಯವಸ್ಥೆ ಎಂದು ಪೀಠ ಹೇಳಿತು.</p>.<p>‘ಮುಚ್ಚಿದ ಲಕೋಟೆ ಸ್ವೀಕರಿಸುವ ವ್ಯವಸ್ಥೆಗೆ ವೈಯಕ್ತಿಕವಾಗಿ ನಾನು ವಿರೊಧವಿದ್ದೇನೆ. ಕೋರ್ಟ್ನಲ್ಲಿ ಪಾರದರ್ಶಕತೆ ಇರಬೇಕು. ಆದೇಶ ನೀಡುವ ಪ್ರಕ್ರಿಯೆಯಲ್ಲಿ ಗೋಪ್ಯ ಕಾಪಾಡುವುದು ಏನಿದೆ?’ ಎಂದು ಮುಖ್ಯನ್ಯಾಯಮೂರ್ತಿ ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>