<p><strong>ಪಣಜಿ:</strong> ದೇಶದಾದ್ಯಂತ ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಗೋವಾ ಸರ್ಕಾರವು ಮುಂಬರುವ ಹೋಳಿ, ಈಸ್ಟರ್ ಮತ್ತು ಈದ್ ಹಬ್ಬಗಳಿಗೂ ಮುನ್ನ ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿಗೆ ಆದೇಶಿಸಿದೆ.</p>.<p>ಉತ್ತರ ಗೋವಾದ ಜಿಲ್ಲಾ ಮ್ಯಾಜಿಸ್ಟ್ರೇಟರ್ ಅಜಿತ್ ರಾಯ್ ಅವರು ಶುಕ್ರವಾರ ನೀಡಿರುವ ಆದೇಶದಂತೆ, ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕ ಆಚರಣೆ, ಗುಂಪುಗೂಡುವಿಕೆ ಮತ್ತು ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ.</p>.<p>ಮುಂಬರುವ ಹಬ್ಬಗಳಾದ ಹೋಳಿ, ಶಾಬ್-ಇ ಬರಾತ್, ಈಸ್ಟರ್ ಮತ್ತು ಈದ್-ಉಲ್-ಫಿತರ್ ಸಂದರ್ಭದಲ್ಲಿ ಗೋವಾದ ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸೇರುವುದು, ಸಾರ್ವಜನಿಕ ಆಚರಣೆ ಮತ್ತು ಗುಂಪುಗೂಡುವುದನ್ನು ಅನುಮತಿಸಲಾಗುವುದಿಲ್ಲ. ಈ ಸಂಬಂಧ ಕ್ರಿಮಿನಲ್ ಕಾರ್ಯವಿಧಾನ ಸಂಹಿತೆಯ ಸೆಕ್ಷನ್ 144ರ ಉಪವಿಭಾಗ 1ರ ಅಡಿಯಲ್ಲಿ ನನ್ನಲ್ಲಿರುವ ಅಧಿಕಾರವನ್ನು ಚಲಾಯಿಸಲಾಗುವುದುʼ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.</p>.<p>ಈ ಆದೇಶವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 188 (ಸರ್ಕಾರದ ಆದೇಶಕ್ಕೆ ಅಸಹಕಾರ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಲಾಗಿದೆ.</p>.<p><strong>ಇದನ್ನೂ ಓದಿ:</strong><a data-ved="0CA0QjhxqFwoTCIjTp56X0u8CFQAAAAAdAAAAABAD" href="https://www.google.com/url?sa=i&url=https%3A%2F%2Fwww.prajavani.net%2Fstories%2Fnational%2Frepetitive-orders-under-section-144-crpc-would-be-an-abuse-of-power-697162.html&psig=AOvVaw1BfVj-mjPqKv7lOIyEnssZ&ust=1616993196108000&source=images&cd=vfe&ved=0CA0QjhxqFwoTCIjTp56X0u8CFQAAAAAdAAAAABAD" jsaction="focus:kvVbVb; mousedown:kvVbVb; touchstart:kvVbVb;" rel="noopener" rlhc="1" target="_blank" title="ಏನು ಹೇಳುತ್ತದೆ ಸಿಆರ್ಪಿಸಿ ಸೆಕ್ಷನ್ 144 | Prajavani">ಏನು ಹೇಳುತ್ತದೆ ಸಿಆರ್ಪಿಸಿ ಸೆಕ್ಷನ್ 144</a></p>.<p>ರಾಜ್ಯದಲ್ಲಿಭಾನುವಾರ ಶಾಬ್-ಇ ಬರಾತ್, ಸೋಮವಾರ ಹೋಳಿ, ಏಪ್ರಿಲ್ 4ರಂದು ಈಸ್ಟರ್ ಹಬ್ಬ ನಡೆಯುತ್ತದೆ.</p>.<p>ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಶಿಗ್ಮೋ ಹಬ್ಬದ ಮೆರವಣಿಗೆಯನ್ನು ರದ್ದುಪಡಿಸಲಾಗಿದೆ ಎಂದು ಗೋವಾ ಸರ್ಕಾರ ಈ ಹಿಂದೆ ಘೋಷಿಸಿತ್ತು.</p>.<p>ದೆಹಲಿ, ಮಧ್ಯಪ್ರದೇಶ ಮತ್ತು ಬಿಹಾರದಲ್ಲಿಯೂ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ.</p>.<p>ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 62,258 ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.</p>.<p>ಶನಿವಾರ ವರದಿಯಾಗಿರುವ 170 ಹೊಸ ಪ್ರಕರಣಗಳೂ ಸೇರಿದಂತೆ ಗೋವಾದಲ್ಲಿ ಸದ್ಯ 1,379 ಸಕ್ರಿಯ ಪ್ರಕರಣಗಳಿವೆ. ಇಲ್ಲಿ ಈವರೆಗೆ ಒಟ್ಟು 824 ಸೋಂಕಿತರು ಮೃತಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಣಜಿ:</strong> ದೇಶದಾದ್ಯಂತ ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಗೋವಾ ಸರ್ಕಾರವು ಮುಂಬರುವ ಹೋಳಿ, ಈಸ್ಟರ್ ಮತ್ತು ಈದ್ ಹಬ್ಬಗಳಿಗೂ ಮುನ್ನ ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿಗೆ ಆದೇಶಿಸಿದೆ.</p>.<p>ಉತ್ತರ ಗೋವಾದ ಜಿಲ್ಲಾ ಮ್ಯಾಜಿಸ್ಟ್ರೇಟರ್ ಅಜಿತ್ ರಾಯ್ ಅವರು ಶುಕ್ರವಾರ ನೀಡಿರುವ ಆದೇಶದಂತೆ, ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕ ಆಚರಣೆ, ಗುಂಪುಗೂಡುವಿಕೆ ಮತ್ತು ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ.</p>.<p>ಮುಂಬರುವ ಹಬ್ಬಗಳಾದ ಹೋಳಿ, ಶಾಬ್-ಇ ಬರಾತ್, ಈಸ್ಟರ್ ಮತ್ತು ಈದ್-ಉಲ್-ಫಿತರ್ ಸಂದರ್ಭದಲ್ಲಿ ಗೋವಾದ ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸೇರುವುದು, ಸಾರ್ವಜನಿಕ ಆಚರಣೆ ಮತ್ತು ಗುಂಪುಗೂಡುವುದನ್ನು ಅನುಮತಿಸಲಾಗುವುದಿಲ್ಲ. ಈ ಸಂಬಂಧ ಕ್ರಿಮಿನಲ್ ಕಾರ್ಯವಿಧಾನ ಸಂಹಿತೆಯ ಸೆಕ್ಷನ್ 144ರ ಉಪವಿಭಾಗ 1ರ ಅಡಿಯಲ್ಲಿ ನನ್ನಲ್ಲಿರುವ ಅಧಿಕಾರವನ್ನು ಚಲಾಯಿಸಲಾಗುವುದುʼ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.</p>.<p>ಈ ಆದೇಶವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 188 (ಸರ್ಕಾರದ ಆದೇಶಕ್ಕೆ ಅಸಹಕಾರ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಲಾಗಿದೆ.</p>.<p><strong>ಇದನ್ನೂ ಓದಿ:</strong><a data-ved="0CA0QjhxqFwoTCIjTp56X0u8CFQAAAAAdAAAAABAD" href="https://www.google.com/url?sa=i&url=https%3A%2F%2Fwww.prajavani.net%2Fstories%2Fnational%2Frepetitive-orders-under-section-144-crpc-would-be-an-abuse-of-power-697162.html&psig=AOvVaw1BfVj-mjPqKv7lOIyEnssZ&ust=1616993196108000&source=images&cd=vfe&ved=0CA0QjhxqFwoTCIjTp56X0u8CFQAAAAAdAAAAABAD" jsaction="focus:kvVbVb; mousedown:kvVbVb; touchstart:kvVbVb;" rel="noopener" rlhc="1" target="_blank" title="ಏನು ಹೇಳುತ್ತದೆ ಸಿಆರ್ಪಿಸಿ ಸೆಕ್ಷನ್ 144 | Prajavani">ಏನು ಹೇಳುತ್ತದೆ ಸಿಆರ್ಪಿಸಿ ಸೆಕ್ಷನ್ 144</a></p>.<p>ರಾಜ್ಯದಲ್ಲಿಭಾನುವಾರ ಶಾಬ್-ಇ ಬರಾತ್, ಸೋಮವಾರ ಹೋಳಿ, ಏಪ್ರಿಲ್ 4ರಂದು ಈಸ್ಟರ್ ಹಬ್ಬ ನಡೆಯುತ್ತದೆ.</p>.<p>ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಶಿಗ್ಮೋ ಹಬ್ಬದ ಮೆರವಣಿಗೆಯನ್ನು ರದ್ದುಪಡಿಸಲಾಗಿದೆ ಎಂದು ಗೋವಾ ಸರ್ಕಾರ ಈ ಹಿಂದೆ ಘೋಷಿಸಿತ್ತು.</p>.<p>ದೆಹಲಿ, ಮಧ್ಯಪ್ರದೇಶ ಮತ್ತು ಬಿಹಾರದಲ್ಲಿಯೂ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ.</p>.<p>ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 62,258 ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.</p>.<p>ಶನಿವಾರ ವರದಿಯಾಗಿರುವ 170 ಹೊಸ ಪ್ರಕರಣಗಳೂ ಸೇರಿದಂತೆ ಗೋವಾದಲ್ಲಿ ಸದ್ಯ 1,379 ಸಕ್ರಿಯ ಪ್ರಕರಣಗಳಿವೆ. ಇಲ್ಲಿ ಈವರೆಗೆ ಒಟ್ಟು 824 ಸೋಂಕಿತರು ಮೃತಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>