ವಿವಿಧ ರಾಜಕೀಯ ರ್ಯಾಲಿಗಳಲ್ಲಿನ ಶರದ್ ಪವಾರ್ ಅವರ ಭಾಷಣಗಳ ಸಂಗ್ರಹವಾಗಿರುವ 'ನೇಮ್ಕಚಿ ಬೋಲ್ಣೇ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಸುಮಾರು 25 ವರ್ಷದ ಹಿಂದೆ ಶರದ್ ಪವಾರ್ ಅವರು ಬಿಜೆಪಿಗೆ ಈ ದೇಶದ ಏಕತೆ ಬೇಕಿಲ್ಲ. ಅದರ ವಿಧಾನ ಒಡಕುಂಟು ಮಾಡುವುದಾಗಿದೆ ಎಂದಿದ್ದರು. ಅಲ್ಲದೆ, ಬಿಜೆಪಿಯ ನೀತಿಯು ಪ್ರಗತಿಗೆ ವಿರೋಧವಾಗಿದ್ದು, ಅದು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತದೆ ಎಂದಿದ್ದರು. ಇದನ್ನು ಅರ್ಥ ಮಾಡಿಕೊಳ್ಳಲು ನಮಗೆ ಜಾಸ್ತಿ ಸಮಯ ಬೇಕಾಯಿತು' ಎಂದರು.