ಇತ್ತೀಚಿನ ಇ.ಡಿ ದಾಳಿ, ಸರ್ಕಾರ ಹಾಗೂ ಆಡಳಿತ ಪಕ್ಷಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳ ನಡುವೆ ಉಭಯ ಪಕ್ಷದ ನಾಯಕರ ನಡುವಣ ಭೇಟಿ ನಡೆದಿದೆ. ಭ್ರಷ್ಟಾಚಾರ, ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಇ.ಡಿ ದೂರು ದಾಖಲಿಸಿತ್ತು. ಈ ಕುರಿತಾಗಿಯೂ ಚರ್ಚೆ ನಡೆಸಿದ್ದಾರೆ ಎಂಬುದು ವರದಿಯಾಗಿದೆ.