‘ಇಲ್ಲಿ ಸಮರ್ಪಕ ಇಂಟರ್ನೆಟ್ ಸಂಪರ್ಕ ಪಡೆಯಲು ಸಾಕಷ್ಟು ಹೆಣಗಾಡಬೇಕು. ಅದರಲ್ಲೂ, ಗ್ರಾಮಾಂತರ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕ ಪಡೆಯುವುದು ದೊಡ್ಡ ಸವಾಲೇ ಆಗಿದೆ. ಇದರಿಂದಾಗಿಯೇ ಸೇವಾ ಭಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾನು ಸಾಕಷ್ಟು ಪರದಾಡಬೇಕಾಯಿತು. ಗಾಂಧಿ ಕುಟುಂಬಸ್ಥರು ಐದು ದಶಕಗಳ ಕಾಲ ಅಧಿಕಾರದಲ್ಲಿದ್ದರೂ, ಈ ಕ್ಷೇತ್ರದಲ್ಲಿ ಜನರಿಗೆ ಅಭಿವೃದ್ಧಿ ಮರೀಚಿಕೆ ಆಗಿತ್ತು ಎಂಬುದು ಇಂದು ನಿಮಗೆ ಅರ್ಥವಾಗಿರಬೇಕು’ ಎಂದು ಹೇಳಿದರು.