ಪ್ರಾಣಿಗಳನ್ನು ಕ್ರೂರವಾಗಿ ನಡೆಸಿಕೊಳ್ಳುವುದನ್ನು ತಡೆಯುವ ಕಾಯ್ದೆ (ತಮಿಳುನಾಡು ತಿದ್ದುಪಡಿ) 2017 ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ವಿಷಯದ ಕುರಿತು ಸಂವಿಧಾನದ ವ್ಯಾಖ್ಯಾನದ ಬಗ್ಗೆ ಹಲವು ಪ್ರಮುಖ ಪ್ರಶ್ನೆಗಳಿವೆ. ಆದ್ದರಿಂದ ಈ ಅರ್ಜಿಗಳ ವಿಚಾರಣೆಯನ್ನು ವಿಸ್ತೃತ ಪೀಠ ನಡೆಸಬೇಕು ಎಂದು ಹೇಳಿತ್ತು. ಈ ಸಂಬಂಧ ತೀರ್ಪು ನೀಡುವಂತೆ ಐದು ಪ್ರಶ್ನೆಗಳನ್ನು ವಿಸ್ತೃತ ಪೀಠಕ್ಕೆ ಸುಪ್ರೀಂ ಕೋರ್ಟ್ ನೀಡಿತ್ತು.