ಭಾನುವಾರ ಪಿಠಾಣಿ, ನೀರಜ್ ಹಾಗೂ ಸಾವಂತ್ ಅವರನ್ನು ಸಿಬಿಐ ಅಧಿಕಾರಿಗಳು ಡಿಆರ್ಡಿಒ ಅತಿಥಿ ಗೃಹದಲ್ಲಿ ವಿಚಾರಣೆ ನಡೆಸಿ ನಂತರ ಸುಶಾಂತ್ ನಿವಾಸಕ್ಕೆ ಕರೆದೊಯ್ದರು. ಅಲ್ಲಿ ಮೂರು ಗಂಟೆಗಳ ತನಿಖೆ ನಡೆಸಿ, ಮತ್ತೆ ಅತಿಥಿ ಗೃಹದಲ್ಲಿ ಅವರ ವಿಚಾರಣೆ ಮುಂದುವರಿಸಿದ್ದರು. ವಿಧಿವಿಜ್ಞಾನ ತಜ್ಞರನ್ನು ಒಳಗೊಂಡ ಸಿಬಿಐ ತಂಡ ಸುಶಾಂತ್ ನಿವಾಸದಲ್ಲಿ ತನಿಖೆ ನಡೆಸಿದೆ.