ಮುಂಬೈ: ‘ರಾಷ್ಟ್ರಮಟ್ಟದಲ್ಲಿ ವಿರೋಧಪಕ್ಷಗಳ ಮೈತ್ರಿಕೂಟವನ್ನು ರಚಿಸುವುದರ ಕುರಿತಂತೆ ಕೆಲವೇ ದಿನಗಳಲ್ಲಿ ಮಾತುಕತೆ ಆರಂಭವಾಗಲಿದೆ‘ ಎಂದು ಶಿವಸೇನೆ ನಾಯಕ ಸಂಜಯ್ರಾವುತ್ ಹೇಳಿದ್ದಾರೆ.
‘ಈ ಕುರಿತಂತೆ ನಾನು ಈಗಾಗಲೇ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೂ ಚರ್ಚಿಸಿದ್ದೇನೆ. ಕಾಂಗ್ರೆಸ್ ಪಕ್ಷ ಇಂತಹ ಮೈತ್ರಿಕೂಟದ ಕೇಂದ್ರವಾಗಿರುತ್ತದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
’ದೇಶದಲ್ಲಿ ಈಗ ವಿರೋಧಪಕ್ಷಗಳಪ್ರಬಲ ಮೈತ್ರಿಕೂಟದ ಅಗತ್ಯವಿದೆ. ಕಾಂಗ್ರೆಸ್ ಪಕ್ಷದ ಪಾಲ್ಗೊಳ್ಳುವಿಕೆ ಇಲ್ಲದೇ ಇದು ಸಾಕಾರವಾಗದು. ಆ ಪಕ್ಷವು ಉದ್ದೇಶಿತ ಮೈತ್ರಿಕೂಟದ ಜೀವವಾಗಿರುತ್ತದೆ. ನಾಯಕತ್ವದ ವಿಷಯವನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ‘ ಎಂದು ರಾವುತ್ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.