<p><strong>ಪಟನಾ</strong>: ಬಿಹಾರದ ರಾಜಕೀಯ ವಲಯದಲ್ಲಿ ಜೆಡಿಯು, ಬಿಜೆಪಿ ಹೊರತು ಪಡಿಸಿ ಇತರ ರಾಜಕೀಯ ಪಕ್ಷಗಳಲ್ಲಿ ಯುವ ನಾಯಕರು ಜನರ ಗಮನ ಸೆಳೆಯುತ್ತಿದ್ದಾರೆ. ಈಪೈಕಿ ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಈಗಾಗಲೇ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ.</p>.<p>ಮಹಾ ಗಠಬಂಧನದ ಚುಕ್ಕಾಣಿ ಹಿಡಿದಿರುವ ತೇಜಸ್ವಿ ಯಾದವ್ ವಯಸ್ಸು 31. 2015ರಿಂದ 2017ರವರೆಗೆ ಮೈತ್ರಿ ಸರ್ಕಾರದ ಉಪ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ತೇಜಸ್ವಿ ಈ ಬಾರಿಯ ಚುನಾವಣೆಯ ತಾರಾ ಪ್ರಚಾರಕರಾಗಿದ್ದರು. ಶೈಕ್ಷಣಿಕ ಅರ್ಹತೆ, ಅನುಭವದ ಕೊರತೆಯನ್ನು ವಿಪಕ್ಷಗಳು ಟೀಕಿಸಿದರೂ ಜನರ ನಡುವೆ ಬೆರೆಯುವ ಮೂಲಕವೇ ತೇಜಸ್ವಿ ಜನಪ್ರಿಯತೆಯನ್ನು ಕಂಡುಕೊಂಡಿದ್ದಾರೆ.</p>.<p>ತೇಜಸ್ವಿಯ ರ್ಯಾಲಿಗಳಿಗೆ ಜನಸಮೂಹವೇ ಹರಿದು ಬರುತ್ತಿರುವ ಕಾರಣವೂ ಇದೇ ಆಗಿದೆ. ಬಿಹಾರದಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆಯೊಂದಿಗೆ ತೇಜಸ್ವಿ ಈ ಬಾರಿ ಕಣಕ್ಕಿಳಿದಿದ್ದರು.ಲಾಲು ಪ್ರಸಾದ್ ಅವರ ಭಾಷಣ ಶೈಲಿಗಿಂತ ಭಿನ್ನವಾಗಿ ಜನರನ್ನು ಸೆಳೆಯುವ ಮಾತುಗಾರಿಕೆ ಈ ಯುವ ನಾಯಕನದ್ದು.</p>.<p>ನಿರುದ್ಯೋಗ ಸಮಸ್ಯೆ, ರಾಜ್ಯದ ಅಭಿವೃದ್ಧಿ,ಶಿಕ್ಷಣ ಮೊದಲಾದ ವಿಷಯಗಳನ್ನೇ ತೇಜಸ್ವಿ ಚುನಾವಣಾ ಅಸ್ತ್ರಗಳನ್ನಾಗಿ ಮಾಡಿಕೊಂಡಿದ್ದಾರೆ.ಬಿಹಾರದಲ್ಲಿ ನಿರುದ್ಯೋಗ ದರ ಶೇ. 46 ಆಗಿದೆ. ಹೀಗಿರುವಾಗ ತಾವು ಅಧಿಕಾರಕ್ಕೇರಿದರೆ 10 ಲಕ್ಷ ಜನರಿಗೆ ಸರ್ಕಾರಿ ನೌಕರಿ ಭರವಸೆ ನೀಡಿದ್ದಾರೆ ತೇಜಸ್ವಿ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/rjds-tejaswi-yadav-tej-pratap-yadav-and-ljps-chirag-psawan-the-youth-challenge-in-bihar-assembly-778112.html" target="_blank">ಬಿಹಾರ ಚುನಾವಣಾ ಫಲಿತಾಂಶ: ತೇಜಸ್ವಿ, ತೇಜ್ಪ್ರತಾಪ್, ಚಿರಾಗ್ ಒಡ್ಡಿದ ಸವಾಲು</a></p>.<p>ಆರ್ಜೆಡಿ ಅಧಿಕಾರಕ್ಕೇರಿದರೆ ಕಾಶ್ಮೀರಿ ಉಗ್ರರು ಬಿಹಾರಕ್ಕೆ ಭೇಟಿ ನೀಡುತ್ತಾರೆ ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ಅವರು ಹೇಳಿದ್ದಕ್ಕೆ ತೇಜಸ್ವಿ ಪ್ರತಿಕ್ರಿಯಿಸಲಿಲ್ಲ.ನಿರುದ್ಯೋಗ, ಭ್ರಷ್ಟಾಚಾರ ಮತ್ತು ದುರಾಡಳಿತ ವಿರುದ್ಧವೇ ನನ್ನ ದನಿ ಎಂದು ಹೇಳುವ ಮೂಲಕ ತೇಜಸ್ವಿ ಇಲ್ಲಿ ಪ್ರಬುದ್ಧತೆ ಮೆರೆದಿದ್ದರು.</p>.<p><strong>ಇದನ್ನೂ ಓದಿ</strong>: <a href="https://www.prajavani.net/india-news/how-tejashwi-yadav-drew-large-crowds-to-his-numerous-rallies-778082.html" target="_blank">ಬಿಹಾರ: ತೇಜಸ್ವಿ ರ್ಯಾಲಿಗೆ ಜನ ಸಮೂಹವೇ ಹರಿದುಬರುತ್ತಿದ್ದುದೇಕೆ?</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟನಾ</strong>: ಬಿಹಾರದ ರಾಜಕೀಯ ವಲಯದಲ್ಲಿ ಜೆಡಿಯು, ಬಿಜೆಪಿ ಹೊರತು ಪಡಿಸಿ ಇತರ ರಾಜಕೀಯ ಪಕ್ಷಗಳಲ್ಲಿ ಯುವ ನಾಯಕರು ಜನರ ಗಮನ ಸೆಳೆಯುತ್ತಿದ್ದಾರೆ. ಈಪೈಕಿ ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಈಗಾಗಲೇ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ.</p>.<p>ಮಹಾ ಗಠಬಂಧನದ ಚುಕ್ಕಾಣಿ ಹಿಡಿದಿರುವ ತೇಜಸ್ವಿ ಯಾದವ್ ವಯಸ್ಸು 31. 2015ರಿಂದ 2017ರವರೆಗೆ ಮೈತ್ರಿ ಸರ್ಕಾರದ ಉಪ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ತೇಜಸ್ವಿ ಈ ಬಾರಿಯ ಚುನಾವಣೆಯ ತಾರಾ ಪ್ರಚಾರಕರಾಗಿದ್ದರು. ಶೈಕ್ಷಣಿಕ ಅರ್ಹತೆ, ಅನುಭವದ ಕೊರತೆಯನ್ನು ವಿಪಕ್ಷಗಳು ಟೀಕಿಸಿದರೂ ಜನರ ನಡುವೆ ಬೆರೆಯುವ ಮೂಲಕವೇ ತೇಜಸ್ವಿ ಜನಪ್ರಿಯತೆಯನ್ನು ಕಂಡುಕೊಂಡಿದ್ದಾರೆ.</p>.<p>ತೇಜಸ್ವಿಯ ರ್ಯಾಲಿಗಳಿಗೆ ಜನಸಮೂಹವೇ ಹರಿದು ಬರುತ್ತಿರುವ ಕಾರಣವೂ ಇದೇ ಆಗಿದೆ. ಬಿಹಾರದಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆಯೊಂದಿಗೆ ತೇಜಸ್ವಿ ಈ ಬಾರಿ ಕಣಕ್ಕಿಳಿದಿದ್ದರು.ಲಾಲು ಪ್ರಸಾದ್ ಅವರ ಭಾಷಣ ಶೈಲಿಗಿಂತ ಭಿನ್ನವಾಗಿ ಜನರನ್ನು ಸೆಳೆಯುವ ಮಾತುಗಾರಿಕೆ ಈ ಯುವ ನಾಯಕನದ್ದು.</p>.<p>ನಿರುದ್ಯೋಗ ಸಮಸ್ಯೆ, ರಾಜ್ಯದ ಅಭಿವೃದ್ಧಿ,ಶಿಕ್ಷಣ ಮೊದಲಾದ ವಿಷಯಗಳನ್ನೇ ತೇಜಸ್ವಿ ಚುನಾವಣಾ ಅಸ್ತ್ರಗಳನ್ನಾಗಿ ಮಾಡಿಕೊಂಡಿದ್ದಾರೆ.ಬಿಹಾರದಲ್ಲಿ ನಿರುದ್ಯೋಗ ದರ ಶೇ. 46 ಆಗಿದೆ. ಹೀಗಿರುವಾಗ ತಾವು ಅಧಿಕಾರಕ್ಕೇರಿದರೆ 10 ಲಕ್ಷ ಜನರಿಗೆ ಸರ್ಕಾರಿ ನೌಕರಿ ಭರವಸೆ ನೀಡಿದ್ದಾರೆ ತೇಜಸ್ವಿ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/rjds-tejaswi-yadav-tej-pratap-yadav-and-ljps-chirag-psawan-the-youth-challenge-in-bihar-assembly-778112.html" target="_blank">ಬಿಹಾರ ಚುನಾವಣಾ ಫಲಿತಾಂಶ: ತೇಜಸ್ವಿ, ತೇಜ್ಪ್ರತಾಪ್, ಚಿರಾಗ್ ಒಡ್ಡಿದ ಸವಾಲು</a></p>.<p>ಆರ್ಜೆಡಿ ಅಧಿಕಾರಕ್ಕೇರಿದರೆ ಕಾಶ್ಮೀರಿ ಉಗ್ರರು ಬಿಹಾರಕ್ಕೆ ಭೇಟಿ ನೀಡುತ್ತಾರೆ ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ಅವರು ಹೇಳಿದ್ದಕ್ಕೆ ತೇಜಸ್ವಿ ಪ್ರತಿಕ್ರಿಯಿಸಲಿಲ್ಲ.ನಿರುದ್ಯೋಗ, ಭ್ರಷ್ಟಾಚಾರ ಮತ್ತು ದುರಾಡಳಿತ ವಿರುದ್ಧವೇ ನನ್ನ ದನಿ ಎಂದು ಹೇಳುವ ಮೂಲಕ ತೇಜಸ್ವಿ ಇಲ್ಲಿ ಪ್ರಬುದ್ಧತೆ ಮೆರೆದಿದ್ದರು.</p>.<p><strong>ಇದನ್ನೂ ಓದಿ</strong>: <a href="https://www.prajavani.net/india-news/how-tejashwi-yadav-drew-large-crowds-to-his-numerous-rallies-778082.html" target="_blank">ಬಿಹಾರ: ತೇಜಸ್ವಿ ರ್ಯಾಲಿಗೆ ಜನ ಸಮೂಹವೇ ಹರಿದುಬರುತ್ತಿದ್ದುದೇಕೆ?</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>