ಟಿಇಟಿ ಅಕ್ರಮ:ಐಎಎಸ್ ಅಧಿಕಾರಿ ಬಂಧನ

ಪುಣೆ: ಮಹಾರಾಷ್ಟ್ರದಲ್ಲಿ 2020ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿನ (ಟಿಇಟಿ) ಅಕ್ರಮಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಸುಶೀಲ್ ಖೋಡ್ವೆಕರ್ ಅವರನ್ನು ಠಾಣೆ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 13ಕ್ಕೆ ಏರಿದೆ.
ಪೊಲೀಸರ ಪ್ರಕಾರ, ಟಿಟಿಟಿ–2020 ಪರೀಕ್ಷೆಯಲ್ಲಿ ಹಣಕ್ಕಾಗಿ ಸುಮಾರು 7,800 ಅಭ್ಯರ್ಥಿಗಳ ಅಂಕಗಳನ್ನು ತಿರುಚಲಾಗಿತ್ತು. ಬಂಧಿತ ಐಎಎಸ್ ಅಧಿಕಾರಿಯನ್ನು ಕೋರ್ಟ್ಗೆ ಹಾಜರುಪಡಿಸಲಾಗುವುದು ಎಂದು ಪುಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಇದಕ್ಕೂ ಮೊದಲು ಮಹಾರಾಷ್ಟ್ರ ಪರೀಕ್ಷಾ ಮಂಡಳಿಯ ಆಯುಕ್ತ ತುಕಾರಾಂ ಸುಪೆ, ಜಿಎ ಸಾಫ್ಟ್ವೇರ್ ಸಂಸ್ಥೆಯ ಪ್ರಿತೀಶ್ ದೇಶ್ಮುಖ್, ಶಿಕ್ಷಣ ಇಲಾಖೆಯ ಕನ್ಸಲ್ಟಂಟ್ ಅಭಿಷೇಕ್ ದೇಶ್ಮುಖ್ ಸೇರಿ 12 ಜನರನ್ನು ಬಂಧಿಸಲಾಗಿತ್ತು. ಅಲ್ಲದೆ, ₹ 4 ಕೋಟಿಗೂ ಅಧಿಕ ನಗದು, ಚಿನ್ನಾಭರಣ ಜಪ್ತಿ ಮಾಡಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.