ಕಾನ್ಪುರದ ಲೋಕಮಾನ್ಯ ತಿಲಕ್ ಟರ್ಮಿನಲ್ನಿಂದ ಸುಲ್ತಾನ್ಪುರಕ್ಕೆ ಹೋಗುತ್ತಿದ್ದ ಎಲ್ಟಿಟಿ ಎಕ್ಸ್ಪ್ರೆಸ್ನ (12143) ಎಸಿ-3 ಕೋಚ್ನಲ್ಲಿ ಪ್ರಯಾಣಿಸುತ್ತಿದ್ದ ಅಂಜಲಿ ತಿವಾರಿ ಅವರ ಎಂಟು ತಿಂಗಳ ಮಗು ಹಸಿವಿನಿಂದ ಅಳಲು ಪ್ರಾರಂಭಿಸಿತು. ಈ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ನಂತರ ಅಂಜಲಿ, ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡಿದ 23 ನಿಮಿಷಗಳ ನಂತರ, ರೈಲ್ವೆ ಆಡಳಿತವು ಕಾನ್ಪುರ ಸೆಂಟ್ರಲ್ನಲ್ಲಿ ಮಗುವಿಗೆ ಹಾಲು ನೀಡಿದೆ.