ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಟಿಎಂಸಿ ನಾಯಕ ಗೌತಮ್ ಅವರು, ಬಿಜೆಪಿ ಶಾಸಕರು ಪ್ರತಿಭಟಿಸುವ ಮೂಲಕ ಜನರಿಗೆ ದ್ರೋಹ ಮಾಡಿದ್ದಾರೆ. ಜನರಿಗೆ ಬಿಜೆಪಿ ನಾಯಕರ ನಿಜ ಮುಖ ತಿಳಿಯಬೇಕು. ಇವರಿಗೆ ಸೋಂಕು ಪ್ರಸರಣದ ಬಗ್ಗೆ ಯಾವುದೇ ಕಾಳಜಿ ಇಲ್ಲ. ಈ ಬಿಕ್ಕಟ್ಟಿನ ಸಮಯವನ್ನು ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರವು ಕೋವಿಡ್ ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದರು.