ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀದಿಗೆ ಮತ್ತೆ ಶಾಕ್: ಟಿಎಂಸಿಯ ಐವರು ಶಾಸಕರು ಬಿಜೆಪಿಗೆ ಸೇರ್ಪಡೆ

Last Updated 8 ಮಾರ್ಚ್ 2021, 14:17 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಯ ಕಾವು ದಿನೇದಿನೇ ಏರುತ್ತಿದ್ದರೆ, ಮುಖಂಡರು ಪಕ್ಷವನ್ನು ತೊರೆದು ಬಿಜೆಪಿ ಸೇರುತ್ತಿರುವುದು ಆಡಳಿತಾರೂಢ ಟಿಎಂಸಿಗೆ ತಲೆನೋವಾಗಿ ಪರಿಣಮಿಸಿದೆ.

ಟಿಎಂಸಿಯ ಐದು ಜನ ಶಾಸಕರು ಸೋಮವಾರ ಬಿಜೆಪಿ ಸೇರಿದ್ದಾರೆ. ಇದರೊಂದಿಗೆ ಮಾಲ್ಡಾ ಜಿಲ್ಲಾ ಪರಿಷದ್‌ ಮೇಲಿನ ತನ್ನ ನಿಯಂತ್ರಣವನ್ನು ಸಹ ಟಿಎಂಸಿ ಕಳೆದುಕೊಂಡಂತಾಗಿದೆ.

ಮಮತಾ ಬ್ಯಾನರ್ಜಿಯ ಆಪ್ತೆಯಾಗಿದ್ದ ಶಾಸಕಿ ಸೋನಾಲಿ ಗುಹಾ, 80 ವರ್ಷದ ರವೀಂದ್ರನಾಥ್‌ ಭಟ್ಟಾಚಾರ್ಯ, 85 ವರ್ಷದ ಜತು ಲಹಿರಿ, ಮಾಜಿ ಫುಟ್ಬಾಲ್‌ ಆಟಗಾರ ದೀಪೇಂದು ಬಿಸ್ವಾಸ್‌ ಹಾಗೂ ಶೀತಲ್‌ ಸರ್ದಾರ್‌ ಬಿಜೆಪಿ ಸೇರಿರುವ ಶಾಸಕರು.

ಕೈಗಾರಿಕೆಗಾಗಿ ಸಿಂಗೂರ್‌ನಲ್ಲಿ ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಚಳವಳಿಯಲ್ಲಿ ರವೀಂದ್ರನಾಥ್‌ ಭಟ್ಟಾಚಾರ್ಯ ಮುಂಚೂಣಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT