ನವದೆಹಲಿ: ಗುಜರಾತ್ನಲ್ಲಿ ಇತ್ತೀಚೆಗೆ ಸಂಭವಿಸಿದ ಮೊರ್ಬಿ ಮೇಲ್ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ ಎಂದು ಪಕ್ಷದ ನಾಯಕ ಡೆರೆಕ್ ಒಬ್ರಿಯಾನ್ ಕಿಡಿಕಾರಿದ್ದಾರೆ.
ಗೋಖಲೆ ಬಂಧನ ಸಂಬಂಧ ಟ್ವೀಟ್ ಮಾಡಿರುವ ಡೆರೆಕ್,ಗೋಖಲೆ ಅವರು ಸೋಮವಾರ ರಾತ್ರಿ 9ಕ್ಕೆ ನವದೆಹಲಿಯಿಂದ ಜೈಪುರಕ್ಕೆ ಪ್ರಯಾಣಿಸಿದ್ದರು. ರಾಜಸ್ಥಾನದ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಅವರನ್ನು ಗುಜರಾತ್ ಪೊಲೀಸರು ಕರೆದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ಗೋಖಲೆ ಅವರು ತಮ್ಮ ತಾಯಿಗೆ ಮುಂಜಾನೆ 2ರ ವೇಳೆಗೆ ಕರೆ ಮಾಡಿದ್ದಾರೆ. ತಮ್ಮನ್ನು ಅಹಮದಾಬಾದ್ಗೆ ಕರೆದೊಯ್ಯುತ್ತಿರುವುದಾಗಿ ಮತ್ತು ಮಧ್ಯಾಹ್ನ ಅಹಮದಾಬಾದ್ ತಲುಪುವುದಾಗಿ ಹೇಳಿದ್ದಾರೆ.
'ಒಂದೆರಡು ನಿಮಿಷ ಕರೆ ಮಾಡಲು ಅವಕಾಶ ನೀಡಿದ್ದ ಪೊಲೀಸರು, ಬಳಿಕ ಗೋಖಲೆ ಅವರ ಫೋನ್ ಅನ್ನು ವಶಕ್ಕೆ ಪಡೆದಿದ್ದಾರೆ' ಎಂದೂ ಮಾಹಿತಿ ನೀಡಿದ್ದಾರೆ.
TMC national spokesperson @SaketGokhale arrested by Gujarat Police.
— Derek O'Brien | ডেরেক ও'ব্রায়েন (@derekobrienmp) December 6, 2022
Saket took a 9pm flight from New Delhi to Jaipur on Mon. When he landed, Gujarat Police was at the airport in Rajasthan waiting for him and picked him up. 1/3
ಬಿಜೆಪಿಯು ಸೇಡಿನ ರಾಜಕೀಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದೆ ಎಂದೂ ಡೆರೆಕ್ ಟೀಕಾ ಪ್ರಹಾರ ನಡೆಸಿದ್ದಾರೆ.
ಪಶ್ಚಿಮ ಗುಜರಾತ್ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ ಅಕ್ಟೋಬರ್ 30ರಂದು ಮುರಿದು ಬಿದ್ದಿತ್ತು. ದುರಂತದಲ್ಲಿ 135 ಮಂದಿ ಮೃತಪಟ್ಟಿದ್ದರು.
ಇವನ್ನೂ ಓದಿ
*ಮೊರ್ಬಿ ದುರಂತ: ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್ ಚಾಟಿ
*ಮೊರ್ಬಿ ಸೇತುವೆ ದುರಂತ: 8 ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ
*ಮೊರ್ಬಿ ತೂಗುಸೇತುವೆ ದುರಂತ: ‘ಏಕಾಗಿ ಸೇತುವೆ ನಿರ್ವಹಣೆಯ ‘ಇನಾಮು’ ನೀಡಲಾಯಿತು?’
*ಗಂಭೀರ ಸ್ಥಿತಿಯಲ್ಲಿದ್ದರೂ ಸೇತುವೆ ಬಳಕೆಗೆ ಅನುಮತಿಸಿದ್ದು ಏಕೆ: ಹೈಕೋರ್ಟ್
*ಮೊರ್ಬಿ ಸೇತುವೆ ನವೀಕರಣಕ್ಕೆ 2 ಕೋಟಿ ಪಡೆದು ಕೇವಲ 12 ಲಕ್ಷ ಖರ್ಚು ಮಾಡಿದ್ದ ಕಂಪನಿ
*ಗುಜರಾತ್: ಮೊರ್ಬಿ ತೂಗು ಸೇತುವೆ ದುರಂತ, ಪುರಸಭೆ ಮುಖ್ಯಾಧಿಕಾರಿ ಅಮಾನತು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.