<p><strong>ಮುಂಬೈ</strong>: ಕೋವಿಡ್ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ತಡೆಯಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ‘ಕೌಟುಂಬಿಕ ಡಾಕ್ಟರ್’ ಚಿಂತನೆಗೆ ಒತ್ತು ನೀಡುವ ‘ನನ್ನ ಡಾಕ್ಟರ್’ ಯೋಜನೆಗೆ ಚಾಲನೆ ನೀಡಿದ್ದಾರೆ.</p>.<p>‘ಕೌಟುಂಬಿಕ ವೈದ್ಯರ ಪಾತ್ರ ಮುಖ್ಯವಾದುದು. ಈ ವೈದ್ಯರು ತಮ್ಮ ರೋಗಿಗಳಿಗೆ ಆರಂಭಿಕ ಹಂತದಲ್ಲಿಯೇ ಸೂಕ್ತ ಮಾರ್ಗದರ್ಶನ ಮಾಡಿದರೆ ಸೋಂಕು ಹರಡುವಿಕೆ ತಡೆಯಬಹುದು’ ಎಂದು ಮುಖ್ಯಮಂತ್ರಿ ಹೇಳಿದರು. 700ಕ್ಕೂ ಹೆಚ್ಚು ವೈದ್ಯರ ಜೊತೆಗೆ ಮುಖ್ಯಮಂತ್ರಿ ಅವರು ಆನ್ಲೈನ್ ಮೂಲಕ ಸಭೆ ನಡೆಸಿದರು.</p>.<p>ಕೋವಿಡ್ ತಡೆಗೆ ಕಳೆದ ಒಂದು ವರ್ಷದಲ್ಲಿ ಹಲವು ಯೋಜನೆಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ.ಇವುಗಳಲ್ಲಿ ‘ಚೇಸ್ ದ ವೈರಸ್’, ‘ನನ್ನ ಕುಟುಂಬ, ನನ್ನ ಜವಾಬ್ದಾರಿ’, ‘ನಾನೂ ಹೊಣೆಗಾರ’, ಮಿಷನ್ ಆಕ್ಸಿಜನ್ ಸೇರಿವೆ.</p>.<p>ಕುಟುಂಬದ ವೈದ್ಯರು ರೋಗಿಗಳನ್ನು ಪರಿಶೀಲಿಸಿ ರೋಗಲಕ್ಷಣಗಳು ಇವೆಯೇ, ಆಸ್ಪತ್ರೆಗೆ ದಾಖಲಾಗುವುದು ಅಗತ್ಯವೇ ಎಂದು ನಿರ್ಧರಿಸಬಹುದು. ಮನೆಯಲ್ಲಿಯೇ ಇರಿಸಿ ಆರೈಕೆ ಮಾಡಿಸಲು ಹಾಗೂ ಅನಿವಾರ್ಯವಾದರೆ ಆಸ್ಪತ್ರೆಗೆ ಸ್ಥಳಾಂತರಿಸಬಹುದು. ಅಲ್ಲದೆ, ಕುಟುಂಬದ ವೈದ್ಯರು ರೋಗಿಗಳ ಕುಟುಂಬಕ್ಕೆ ಮಾನಸಿಕ ಸ್ಥೈರ್ಯ ತುಂಬುವುದು ಸಾಧ್ಯವಾಗಲಿದೆ ಎಂದರು.</p>.<p>‘ವೈದ್ಯರು ತಮ್ಮ ವ್ಯಾಪ್ತಿಯ ಕೋವಿಡ್ ಆರೈಕೆ ಕೇಂದ್ರಗಳು ಮತ್ತು ಜಂಬೋ ಫೀಲ್ಡ್ ಆಸ್ಪತ್ರೆಗಳಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು ಹಾಗೂ ರೋಗಿಗಳ ಜೊತೆಗೆ ಸಮಾಲೋಚನೆಗೆ ಮುಂದಾಗಬೇಕು. ಚಿಕಿತ್ಸೆಯಲ್ಲಿ ಏಕರೂಪದ ಶಿಷ್ಟಾಚಾರ ಕಾಯ್ದುಕೊಳ್ಳುವುದು ಅಗತ್ಯ’ ಎಂದು ಆನ್ಲೈನ್ ಸಭೆಯಲ್ಲಿ ಸಲಹೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಕೋವಿಡ್ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ತಡೆಯಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ‘ಕೌಟುಂಬಿಕ ಡಾಕ್ಟರ್’ ಚಿಂತನೆಗೆ ಒತ್ತು ನೀಡುವ ‘ನನ್ನ ಡಾಕ್ಟರ್’ ಯೋಜನೆಗೆ ಚಾಲನೆ ನೀಡಿದ್ದಾರೆ.</p>.<p>‘ಕೌಟುಂಬಿಕ ವೈದ್ಯರ ಪಾತ್ರ ಮುಖ್ಯವಾದುದು. ಈ ವೈದ್ಯರು ತಮ್ಮ ರೋಗಿಗಳಿಗೆ ಆರಂಭಿಕ ಹಂತದಲ್ಲಿಯೇ ಸೂಕ್ತ ಮಾರ್ಗದರ್ಶನ ಮಾಡಿದರೆ ಸೋಂಕು ಹರಡುವಿಕೆ ತಡೆಯಬಹುದು’ ಎಂದು ಮುಖ್ಯಮಂತ್ರಿ ಹೇಳಿದರು. 700ಕ್ಕೂ ಹೆಚ್ಚು ವೈದ್ಯರ ಜೊತೆಗೆ ಮುಖ್ಯಮಂತ್ರಿ ಅವರು ಆನ್ಲೈನ್ ಮೂಲಕ ಸಭೆ ನಡೆಸಿದರು.</p>.<p>ಕೋವಿಡ್ ತಡೆಗೆ ಕಳೆದ ಒಂದು ವರ್ಷದಲ್ಲಿ ಹಲವು ಯೋಜನೆಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ.ಇವುಗಳಲ್ಲಿ ‘ಚೇಸ್ ದ ವೈರಸ್’, ‘ನನ್ನ ಕುಟುಂಬ, ನನ್ನ ಜವಾಬ್ದಾರಿ’, ‘ನಾನೂ ಹೊಣೆಗಾರ’, ಮಿಷನ್ ಆಕ್ಸಿಜನ್ ಸೇರಿವೆ.</p>.<p>ಕುಟುಂಬದ ವೈದ್ಯರು ರೋಗಿಗಳನ್ನು ಪರಿಶೀಲಿಸಿ ರೋಗಲಕ್ಷಣಗಳು ಇವೆಯೇ, ಆಸ್ಪತ್ರೆಗೆ ದಾಖಲಾಗುವುದು ಅಗತ್ಯವೇ ಎಂದು ನಿರ್ಧರಿಸಬಹುದು. ಮನೆಯಲ್ಲಿಯೇ ಇರಿಸಿ ಆರೈಕೆ ಮಾಡಿಸಲು ಹಾಗೂ ಅನಿವಾರ್ಯವಾದರೆ ಆಸ್ಪತ್ರೆಗೆ ಸ್ಥಳಾಂತರಿಸಬಹುದು. ಅಲ್ಲದೆ, ಕುಟುಂಬದ ವೈದ್ಯರು ರೋಗಿಗಳ ಕುಟುಂಬಕ್ಕೆ ಮಾನಸಿಕ ಸ್ಥೈರ್ಯ ತುಂಬುವುದು ಸಾಧ್ಯವಾಗಲಿದೆ ಎಂದರು.</p>.<p>‘ವೈದ್ಯರು ತಮ್ಮ ವ್ಯಾಪ್ತಿಯ ಕೋವಿಡ್ ಆರೈಕೆ ಕೇಂದ್ರಗಳು ಮತ್ತು ಜಂಬೋ ಫೀಲ್ಡ್ ಆಸ್ಪತ್ರೆಗಳಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು ಹಾಗೂ ರೋಗಿಗಳ ಜೊತೆಗೆ ಸಮಾಲೋಚನೆಗೆ ಮುಂದಾಗಬೇಕು. ಚಿಕಿತ್ಸೆಯಲ್ಲಿ ಏಕರೂಪದ ಶಿಷ್ಟಾಚಾರ ಕಾಯ್ದುಕೊಳ್ಳುವುದು ಅಗತ್ಯ’ ಎಂದು ಆನ್ಲೈನ್ ಸಭೆಯಲ್ಲಿ ಸಲಹೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>