<p><strong>ಶಾಹಜಹಾಂಪುರ (ಉತ್ತರ ಪ್ರದೇಶ): </strong>ಗರ್ಭಿಣಿಯಾಗಿದ್ದ 14 ವರ್ಷದ ದಲಿತ ಬಾಲಕಿಯನ್ನು ತಂದೆ ಮತ್ತು ಆಕೆಯ ಸಹೋದರನೇ ಹತ್ಯೆಗೈದಿರುವ ಕೃತ್ಯ ಸಿದೌಲಿ ಪಟ್ಟಣ ಸಮೀಪದ ದುಲ್ಹಾಪುರ ಗ್ರಾಮದಲ್ಲಿ ನಡೆದಿದೆ.</p>.<p>ಮಗುವಿನ ತಂದೆ ಯಾರು ಎನ್ನುವುದನ್ನು ಹೇಳಲು ಬಾಲಕಿ ನಿರಾಕರಿಸಿದ್ದಕ್ಕೆ ಈ ಇಬ್ಬರು ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದುಲ್ಹಾಪುರ ಗ್ರಾಮದಲ್ಲಿ ರುಂಡವಿಲ್ಲದ ಬಾಲಕಿಯ ಶವ ಮಂಗಳವಾರ ಪತ್ತೆಯಾದ ಬಳಿಕ ಈ ಪ್ರಕರಣ ಗೊತ್ತಾಗಿದೆ.</p>.<p>‘ಬಾಲಕಿ ಗರ್ಭಿಣಿಯಾಗಿ ಆರು ತಿಂಗಳಾಗಿದ್ದವು. ಮೇಲ್ನೋಟಕ್ಕೆ ಇದು ಮರ್ಯಾದೆಗೇಡಿ ಹತ್ಯೆ ಎನ್ನುವುದು ಕಂಡು ಬಂದಿದೆ. ಬಾಲಕಿಯ ತಂದೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್. ಆನಂದ್ ತಿಳಿಸಿದ್ದಾರೆ.</p>.<p>'ಸೆಪ್ಟೆಂಬರ್ 24ರಂದೇ ಬಾಲಕಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಆದರೆ, ಕುಟುಂಬದವರು ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಸಂಬಂಧ ಹೊಂದಿದ್ದ ವ್ಯಕ್ತಿಯ ಜತೆಗೆ ಮದುವೆ ಮಾಡಿಸಲು ಬಯಸಿದ್ದೆ ಎಂದು ಬಾಲಕಿಯ ತಂದೆ ವಿಚಾರಣೆ ವೇಳೆ ತಿಳಿಸಿದ್ದಾನೆ’ ಎಂದು ಅವರು ತಿಳಿಸಿದ್ದಾರೆ.</p>.<p>ಕೊಲೆ ಮಾಡಿದ ನಂತರ ಬಾಲಕಿಯ ಸಹೋದರ ಪರಾರಿಯಾಗಿದ್ದಾನೆ. ಬಾಲಕಿಯ ತಂದೆಯನ್ನು ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಾಹಜಹಾಂಪುರ (ಉತ್ತರ ಪ್ರದೇಶ): </strong>ಗರ್ಭಿಣಿಯಾಗಿದ್ದ 14 ವರ್ಷದ ದಲಿತ ಬಾಲಕಿಯನ್ನು ತಂದೆ ಮತ್ತು ಆಕೆಯ ಸಹೋದರನೇ ಹತ್ಯೆಗೈದಿರುವ ಕೃತ್ಯ ಸಿದೌಲಿ ಪಟ್ಟಣ ಸಮೀಪದ ದುಲ್ಹಾಪುರ ಗ್ರಾಮದಲ್ಲಿ ನಡೆದಿದೆ.</p>.<p>ಮಗುವಿನ ತಂದೆ ಯಾರು ಎನ್ನುವುದನ್ನು ಹೇಳಲು ಬಾಲಕಿ ನಿರಾಕರಿಸಿದ್ದಕ್ಕೆ ಈ ಇಬ್ಬರು ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದುಲ್ಹಾಪುರ ಗ್ರಾಮದಲ್ಲಿ ರುಂಡವಿಲ್ಲದ ಬಾಲಕಿಯ ಶವ ಮಂಗಳವಾರ ಪತ್ತೆಯಾದ ಬಳಿಕ ಈ ಪ್ರಕರಣ ಗೊತ್ತಾಗಿದೆ.</p>.<p>‘ಬಾಲಕಿ ಗರ್ಭಿಣಿಯಾಗಿ ಆರು ತಿಂಗಳಾಗಿದ್ದವು. ಮೇಲ್ನೋಟಕ್ಕೆ ಇದು ಮರ್ಯಾದೆಗೇಡಿ ಹತ್ಯೆ ಎನ್ನುವುದು ಕಂಡು ಬಂದಿದೆ. ಬಾಲಕಿಯ ತಂದೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್. ಆನಂದ್ ತಿಳಿಸಿದ್ದಾರೆ.</p>.<p>'ಸೆಪ್ಟೆಂಬರ್ 24ರಂದೇ ಬಾಲಕಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಆದರೆ, ಕುಟುಂಬದವರು ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಸಂಬಂಧ ಹೊಂದಿದ್ದ ವ್ಯಕ್ತಿಯ ಜತೆಗೆ ಮದುವೆ ಮಾಡಿಸಲು ಬಯಸಿದ್ದೆ ಎಂದು ಬಾಲಕಿಯ ತಂದೆ ವಿಚಾರಣೆ ವೇಳೆ ತಿಳಿಸಿದ್ದಾನೆ’ ಎಂದು ಅವರು ತಿಳಿಸಿದ್ದಾರೆ.</p>.<p>ಕೊಲೆ ಮಾಡಿದ ನಂತರ ಬಾಲಕಿಯ ಸಹೋದರ ಪರಾರಿಯಾಗಿದ್ದಾನೆ. ಬಾಲಕಿಯ ತಂದೆಯನ್ನು ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>