ಮುಜಾಫ್ಫರ್ನಗರ(ಉತ್ತರ ಪ್ರದೇಶ): ಇತರೆ ರಾಜ್ಯಗಳಲ್ಲಿ ಬೆಳೆದ ಭತ್ತವನ್ನು ಹರಿಯಾಣ ಮಂಡಿಯಲ್ಲಿ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಿರುವ ಹರಿಯಾಣ ಸರ್ಕಾರದ ಕ್ರಮವನ್ನು ವಿರೋಧಿಸಿರುವ ರೈತರು ಮಂಗಳವಾರ ಬಿದೋಲಿ ಮತ್ತು ಕೈರಾಣಾ ಸಮೀಪದ ಉತ್ತರ ಪ್ರದೇಶ– ಹರಿಯಾಣ ಗಡಿ ಭಾಗದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.