<p><strong>ಲಖನೌ:</strong>ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇತ್ತೀಚೆಗೆ ನಡೆದ ರ್ಯಾಲಿಯೊಂದರಲ್ಲಿ, ʼನಾನು ಮಹಿಳೆ, ನಾನು ಹೋರಾಡಬಲ್ಲೆʼ ಎಂದು ಹೇಳಿಕೆ ನೀಡಿದ್ದಾರೆ.ಪ್ರಿಯಾಂಕಾರ ಈ ಘೋಷಣೆಯು ಪುನಶ್ಚೇತನದ ಪ್ರಯತ್ನದಲ್ಲಿರುವ ಪಕ್ಷದತ್ತ ಮಹಿಳಾ ಮತದಾರರನ್ನು ಸೆಳೆಯುವನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ.</p>.<p>ದೇಶದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿರುವಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.</p>.<p>ದಶಕದ ಕಾಲದಿಂದಲೂ ಭಾರತದ ರಾಜಕೀಯದಲ್ಲಿಪ್ರಾಬಲ್ಯ ಸಾಧಿಸಿರುವ ರಾಷ್ಟ್ರೀಯವಾದಿ ಪಕ್ಷ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ2024ರ ಸಾರ್ವತ್ರಿಕ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ಸವಾಲು ನೀಡಬಲ್ಲದೇ ಎಂಬ ಸುಳಿವನ್ನು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶನೀಡಲಿದೆ.</p>.<p><strong>ಇದನ್ನೂ ಓದಿ:</strong><a href="https://cms.prajavani.net/india-news/congress-will-give-opportunity-to-women-in-upcoming-elections-880611.html" itemprop="url">ಮಹಿಳೆಗೆ ಮನ್ನಣೆ: ಪ್ರತ್ಯೇಕ ಪ್ರಣಾಳಿಕೆ; ಪ್ರಿಯಾಂಕಾ ಭರವಸೆ </a></p>.<p>ಆರ್ಥಿಕ ಅಭಿವೃದ್ಧಿ, ಸದೃಢ- ನವಭಾರತ ನಿರ್ಮಾಣದ ಭರವಸೆಯೊಂದಿಗೆ2014ರಲ್ಲಿ ಅಧಿಕಾರಕ್ಕೇರಿದ ಮೋದಿ,2019ರ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದರು.</p>.<p>136 ವರ್ಷಗಳಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷವುನಾಯಕತ್ವದಲ್ಲಿನ ವೈಫಲ್ಯದಿಂದಾಗಿ ಹಿನ್ನಡೆ ಅನುಭವಿಸಿದೆ. ಹೀಗಾಗಿಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಹಾದಿ ಸುಗಮವಾಯಿತು.</p>.<p>2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ವಿಫಲವಾದ ಕಾರಣ ರಾಹುಲ್ ಗಾಂಧಿ ಪಕ್ಷದ ನಾಯಕತ್ವ ತೊರೆದಿದ್ದರು. ಬಳಿಕಸೋನಿಯಾ ಗಾಂಧಿಯವರೇ ಪಕ್ಷದ ರಾಷ್ಟ್ರೀಯ ನಾಯಕತ್ವ ವಹಿಸಿಕೊಂಡಿದ್ದಾರೆ. ಆದಾಗ್ಯೂಅವರ ನಾಯಕತ್ವದ ಶೈಲಿಯನ್ನು ಟೀಕಿಸುವವರುಪಕ್ಷದಲ್ಲಿ ಸಾಕಷ್ಟು ಜನರಿದ್ದಾರೆ.</p>.<p>2019ರಲ್ಲಿ ರಾಜಕೀಯ ಪ್ರವೇಶಿಸಿದ ಪ್ರಿಯಾಂಕಾ, ಮಹಿಳಾ ನಾಯಕತ್ವಕ್ಕೆ ಮನ್ನಣೆ ತಂದುಕೊಡುವ ಜೊತೆಗೆ ಕಾಂಗ್ರೆಸ್ನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಬಿಜೆಪಿಯಹಿಂದೂ ಅಜೆಂಡಾಕ್ಕೆ ಪರ್ಯಾಯವಾಗಿ, ಕಾಂಗ್ರೆಸ್ ತನ್ನ ಜಾತ್ಯತೀತ ಪರಂಪರೆಯೊಂದಿಗೆ, ಎಲ್ಲರನ್ನೂ ಒಳಗೊಳ್ಳುವರಾಷ್ಟ್ರೀಯ ಪಕ್ಷವೆಂಬಂತೆ ಉತ್ತರ ಪ್ರದೇಶದಲ್ಲಿ ಬಿಂಬಿತವಾಗುತ್ತಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/bjp-may-drop-over-100-sitting-mlas-in-uttar-pradesh-871678.html" itemprop="url">ಯುಪಿ: ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ 100ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಕೊಕ್</a></p>.<p>ದೇಶದಾದ್ಯಂತ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದರ ವಿರುದ್ಧ ಮಹಿಳೆಯರು ಜಾಗೃತರಾಗಿದ್ದು, ಪ್ರಿಯಾಂಕಾ ಮಹಿಳೆಯರಿಗೆ ಬದಲಾವಣೆಯ ಭರವಸೆ ನೀಡುತ್ತಿದ್ದಾರೆ.</p>.<p>ಕೋವಿಡ್-19ನಿರ್ವಹಣೆ ಮತ್ತುಮಹಿಳೆಯರ ಮೇಲಿನ ದೌರ್ಜನ್ಯ ತಡೆ ವಿಚಾರದಲ್ಲಿ ಉತ್ತರ ಪ್ರದೇಶಬಿಜೆಪಿ ಸರ್ಕಾರ ವಿಫಲವಾಗಿದೆ ಎಂಬ ಟೀಕೆಗಳು ವ್ಯಾಪಕವಾಗಿವೆ. ಹಾಗೆಯೇ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನೂ ಸರ್ಕಾರ ಎದುರಿಸುತ್ತಿದೆ.</p>.<p>ಇದೇವೇಳೆಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಭದ್ರಕೋಟೆಯಾಗಿರುವಗೋರಖಪುರದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ,ʼನಾನು ಮತ್ತು ಕಾಂಗ್ರೆಸ್ ಪಕ್ಷವು ನಿಮಗಾಗಿ ಹೋರಾಟ ನಡೆಸಲಿದ್ದೇವೆ ಎಂದು ಮಹಿಳೆಯರಿಗೆ ಹೇಳಲು ಬಯಸುತ್ತೇನೆʼ ಎಂದು ಘೋಷಿಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/for-narendra-modi-to-be-pm-in-2024-yogi-adityanath-as-up-cm-a-must-in-2022-amit-shah-879704.html" itemprop="url">2024ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗಲು 2022ರಲ್ಲಿ ಯೋಗಿ ಸಿಎಂ ಆಗಬೇಕು: ಅಮಿತ್ ಶಾ</a></p>.<p>ಈ ರ್ಯಾಲಿಯಲ್ಲಿ ಅಂದಾಜು40,000 ಜನರು ಭಾಗವಹಿಸಿದ್ದರು. ಅದರಲ್ಲಿ ನಾಲ್ಕನೇ ಒಂದು ಭಾಗದಷ್ಟು ಮಹಿಳೆಯರಿದ್ದರುಎನ್ನಲಾಗಿದೆ.</p>.<p>ʼಜನರು, ಮುಖ್ಯವಾಗಿ ಮಹಿಳೆಯರು ಭರವಸೆಗಳೊಂದಿಗೆ ಕಾಂಗ್ರೆಸ್ನತ್ತ ನೋಡಲಾರಂಭಿಸಿದ್ದಾರೆ. ನಮ್ಮ ಪಕ್ಷವು ಮಹಿಳೆಯರೊಂದಿಗೆ ಮತ್ತು ಅವರ ಧ್ವನಿಯಾಗಿ ನಿಲ್ಲಲಿದೆʼ ಎಂದು ರ್ಯಾಲಿಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತೆ ಸುನಿತಾ ಮಿಶ್ರಾ ಎನ್ನುವವರು ಹೇಳಿದ್ದಾರೆ.</p>.<p>ರಾಜ್ಯದ403ಕ್ಷೇತ್ರಗಳ ಪೈಕಿ ಶೇ.40 ರಷ್ಟು ಸ್ಥಾನಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಕಾಂಗ್ರೆಸ್ ನೀಡಿರುವ ವಾಗ್ದಾನವನ್ನೂಮತದಾರರು ಸ್ವಾಗತಿಸಿದ್ದಾರೆ ಎಂದೂಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>ಗೋರಖಪುರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ನಿರ್ಮಲಾ ಪಾಸ್ವಾನ್, ʼಪಕ್ಷಕ್ಕೆ ಸೇರಿಕೊಳ್ಳಲು ಸಾಕಷ್ಟು ಮಹಿಳೆಯರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಮಹಿಳೆಯರು ಬದಲಾವಣೆಯನ್ನು ತರಲಿದ್ದಾರೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/adityanath-changed-caste-of-king-mihir-bhoj-for-votes-akhilesh-yadav-870200.html" itemprop="url">ಮತಕ್ಕಾಗಿ ರಾಜ ಮಿಹಿರ್ ಭೋಜ್ ಜಾತಿ ಬದಲಿಸಿದ ಯೋಗಿ: ಅಖಿಲೇಶ್ ಟೀಕೆ</a></p>.<p>ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಸ್ಮಾರ್ಟ್ಫೋನ್ ವಿತರಣೆ, ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ, ಕುಟುಂಬವೊಂದಕ್ಕೆ ವಾರ್ಷಿಕ ಮೂರು ಅಡುಗೆ ಅನಿಲ ಸಿಲಿಂಡರ್ಗಳ ಉಚಿತ ವಿತರಣೆ, ಉದ್ಯೋಗದಲ್ಲಿ ಲಿಂಗಾಧಾರಿತ ಮೀಸಲಾತಿ ಸೇರಿದಂತೆ ಹಲವು ಭರವಸೆಗಳನ್ನು ಕಾಂಗ್ರೆಸ್ ನೀಡಿದೆ.</p>.<p>ಆದಾಗ್ಯೂ ನಾಯಕತ್ವದ ಬಿಕ್ಕಟ್ಟು ಸೇರಿದಂತೆ ಸಾಕಷ್ಟು ಆಂತರಿಕ ಸಮಸ್ಯೆಗಳನ್ನುಕಾಂಗ್ರೆಸ್ ಎದುರಿಸುತ್ತಿದೆ.</p>.<p>ರಾಜ್ಯ ನಾಯಕರು ಕೇವಲಹೊಗಳುಭಟ್ಟರ ಮಾತುಗಳನ್ನಷ್ಟೇ ಕೇಳುತ್ತಿದ್ದಾರೆ. ಪಕ್ಷದಲ್ಲಿ ಇಂತಹವರ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಎಂಬಂತೆ ಹೆಚ್ಚಾಗಿದೆʼ ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದ ಗೋರಖಪುರ ವಿಧಾನಸಭೆಕ್ಷೇತ್ರದ ಮಾಜಿ ಅಭ್ಯರ್ಥಿ ರಾಣಾ ರಾಹುಲ್ ಸಿಂಗ್ ಆರೋಪಿಸಿದ್ದರು.</p>.<p>ʼತಳಮಟ್ಟದಿಂದ ಶ್ರಮಿಸಿದ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗುತ್ತಿದೆʼ ಎಂದೂ ದೂರಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/world-news/himachala-pradesh-bypoll-elections-congress-bjp-politics-880858.html" itemprop="url">ಹಿಮಾಚಲ ಪ್ರದೇಶ: 1 ಲೋಕಸಭೆ, 3 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು</a></p>.<p>ಈ ಬಗ್ಗೆ ಪ್ರಿಯಾಂಕಾ ವಾದ್ರಾ ನಿಕಟವರ್ತಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್ ಸಂಘಟನಾ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.</p>.<p>ʼಬದಲಾವಣೆ ಸುಲಭವಲ್ಲ. ಆದರೆ, ಬದಲಾವಣೆ ಒಳ್ಳೆಯದು. ಈ ಬದಲಾವಣೆಗಳು ದೀರ್ಘಾವಧಿವರೆಗೆ ಕೆಲಸ ಮಾಡಲಿವೆʼ ಎಂದುಸುಪ್ರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p><strong>ಕಾಂಗ್ರೆಸ್ಗೆ ಕೇವಲ 4-7 ಸ್ಥಾನ: ಸಿ-ವೋಟರ್</strong><br />ಸಿ-ವೋಟರ್ ಇತ್ತೀಚೆಗೆ ನಡೆಸಿದ ಸಮೀಕ್ಷೆಪ್ರಕಾರ, ರಾಜ್ಯದ403 ಸ್ಥಾನಗಳಲ್ಲಿ240ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿಯು ಸುಲಭವಾಗಿ ಜಯಿಸಲಿದೆ. ಕಾಂಗ್ರೆಸ್ ಮೂರರಿಂದ ಏಳು ಸ್ಥಾನಗಳನ್ನಷ್ಟೇ ಗೆಲ್ಲಬಹುದು. ಇದರೊಂದಿಗೆ ಜಯಗಳಿಕೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ ಎನ್ನಲಾಗಿದೆ.</p>.<p>2017ರ ಚುನಾವಣೆಯಲ್ಲಿ114 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ7 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ312 ಸ್ಥಾನಗಳನ್ನು ಜಯಿಸಿ ಅಧಿಕಾರಕ್ಕೇರಿತ್ತು.</p>.<p><strong>ಇವನ್ನೂ ಓದಿ<br />*</strong><a href="https://cms.prajavani.net/india-news/uttar-pradesh-polls-priyanka-gandhi-promises-free-medical-treatment-up-to-rs-10-lakh-878426.html" itemprop="url">ಉ.ಪ್ರದೇಶ ಚುನಾವಣೆ | ₹10 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ: ಪ್ರಿಯಾಂಕಾ </a><br /><strong>*</strong><a href="https://www.prajavani.net/stories/national/gorakhpur-tough-task-again-bjp-637302.html " target="_blank">ಗೋರಖಪುರ: ಬಿಜೆಪಿಗೆ ಕಠಿಣ ಹಾದಿ </a><br />*<a href="https://cms.prajavani.net/india-news/modi-govt-has-created-records-in-giving-trouble-to-people-priyanka-gandhi-on-fuel-prices-878168.html" itemprop="url">ಜನರಿಗೆ ಕಷ್ಟ ಕೊಡುವುದರಲ್ಲಿ ಮೋದಿ ಸರ್ಕಾರದಿಂದ ದಾಖಲೆ: ಪ್ರಿಯಾಂಕಾ ಗಾಂಧಿ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong>ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇತ್ತೀಚೆಗೆ ನಡೆದ ರ್ಯಾಲಿಯೊಂದರಲ್ಲಿ, ʼನಾನು ಮಹಿಳೆ, ನಾನು ಹೋರಾಡಬಲ್ಲೆʼ ಎಂದು ಹೇಳಿಕೆ ನೀಡಿದ್ದಾರೆ.ಪ್ರಿಯಾಂಕಾರ ಈ ಘೋಷಣೆಯು ಪುನಶ್ಚೇತನದ ಪ್ರಯತ್ನದಲ್ಲಿರುವ ಪಕ್ಷದತ್ತ ಮಹಿಳಾ ಮತದಾರರನ್ನು ಸೆಳೆಯುವನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ.</p>.<p>ದೇಶದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿರುವಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.</p>.<p>ದಶಕದ ಕಾಲದಿಂದಲೂ ಭಾರತದ ರಾಜಕೀಯದಲ್ಲಿಪ್ರಾಬಲ್ಯ ಸಾಧಿಸಿರುವ ರಾಷ್ಟ್ರೀಯವಾದಿ ಪಕ್ಷ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ2024ರ ಸಾರ್ವತ್ರಿಕ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ಸವಾಲು ನೀಡಬಲ್ಲದೇ ಎಂಬ ಸುಳಿವನ್ನು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶನೀಡಲಿದೆ.</p>.<p><strong>ಇದನ್ನೂ ಓದಿ:</strong><a href="https://cms.prajavani.net/india-news/congress-will-give-opportunity-to-women-in-upcoming-elections-880611.html" itemprop="url">ಮಹಿಳೆಗೆ ಮನ್ನಣೆ: ಪ್ರತ್ಯೇಕ ಪ್ರಣಾಳಿಕೆ; ಪ್ರಿಯಾಂಕಾ ಭರವಸೆ </a></p>.<p>ಆರ್ಥಿಕ ಅಭಿವೃದ್ಧಿ, ಸದೃಢ- ನವಭಾರತ ನಿರ್ಮಾಣದ ಭರವಸೆಯೊಂದಿಗೆ2014ರಲ್ಲಿ ಅಧಿಕಾರಕ್ಕೇರಿದ ಮೋದಿ,2019ರ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದರು.</p>.<p>136 ವರ್ಷಗಳಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷವುನಾಯಕತ್ವದಲ್ಲಿನ ವೈಫಲ್ಯದಿಂದಾಗಿ ಹಿನ್ನಡೆ ಅನುಭವಿಸಿದೆ. ಹೀಗಾಗಿಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಹಾದಿ ಸುಗಮವಾಯಿತು.</p>.<p>2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ವಿಫಲವಾದ ಕಾರಣ ರಾಹುಲ್ ಗಾಂಧಿ ಪಕ್ಷದ ನಾಯಕತ್ವ ತೊರೆದಿದ್ದರು. ಬಳಿಕಸೋನಿಯಾ ಗಾಂಧಿಯವರೇ ಪಕ್ಷದ ರಾಷ್ಟ್ರೀಯ ನಾಯಕತ್ವ ವಹಿಸಿಕೊಂಡಿದ್ದಾರೆ. ಆದಾಗ್ಯೂಅವರ ನಾಯಕತ್ವದ ಶೈಲಿಯನ್ನು ಟೀಕಿಸುವವರುಪಕ್ಷದಲ್ಲಿ ಸಾಕಷ್ಟು ಜನರಿದ್ದಾರೆ.</p>.<p>2019ರಲ್ಲಿ ರಾಜಕೀಯ ಪ್ರವೇಶಿಸಿದ ಪ್ರಿಯಾಂಕಾ, ಮಹಿಳಾ ನಾಯಕತ್ವಕ್ಕೆ ಮನ್ನಣೆ ತಂದುಕೊಡುವ ಜೊತೆಗೆ ಕಾಂಗ್ರೆಸ್ನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಬಿಜೆಪಿಯಹಿಂದೂ ಅಜೆಂಡಾಕ್ಕೆ ಪರ್ಯಾಯವಾಗಿ, ಕಾಂಗ್ರೆಸ್ ತನ್ನ ಜಾತ್ಯತೀತ ಪರಂಪರೆಯೊಂದಿಗೆ, ಎಲ್ಲರನ್ನೂ ಒಳಗೊಳ್ಳುವರಾಷ್ಟ್ರೀಯ ಪಕ್ಷವೆಂಬಂತೆ ಉತ್ತರ ಪ್ರದೇಶದಲ್ಲಿ ಬಿಂಬಿತವಾಗುತ್ತಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/bjp-may-drop-over-100-sitting-mlas-in-uttar-pradesh-871678.html" itemprop="url">ಯುಪಿ: ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ 100ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಕೊಕ್</a></p>.<p>ದೇಶದಾದ್ಯಂತ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದರ ವಿರುದ್ಧ ಮಹಿಳೆಯರು ಜಾಗೃತರಾಗಿದ್ದು, ಪ್ರಿಯಾಂಕಾ ಮಹಿಳೆಯರಿಗೆ ಬದಲಾವಣೆಯ ಭರವಸೆ ನೀಡುತ್ತಿದ್ದಾರೆ.</p>.<p>ಕೋವಿಡ್-19ನಿರ್ವಹಣೆ ಮತ್ತುಮಹಿಳೆಯರ ಮೇಲಿನ ದೌರ್ಜನ್ಯ ತಡೆ ವಿಚಾರದಲ್ಲಿ ಉತ್ತರ ಪ್ರದೇಶಬಿಜೆಪಿ ಸರ್ಕಾರ ವಿಫಲವಾಗಿದೆ ಎಂಬ ಟೀಕೆಗಳು ವ್ಯಾಪಕವಾಗಿವೆ. ಹಾಗೆಯೇ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನೂ ಸರ್ಕಾರ ಎದುರಿಸುತ್ತಿದೆ.</p>.<p>ಇದೇವೇಳೆಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಭದ್ರಕೋಟೆಯಾಗಿರುವಗೋರಖಪುರದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ,ʼನಾನು ಮತ್ತು ಕಾಂಗ್ರೆಸ್ ಪಕ್ಷವು ನಿಮಗಾಗಿ ಹೋರಾಟ ನಡೆಸಲಿದ್ದೇವೆ ಎಂದು ಮಹಿಳೆಯರಿಗೆ ಹೇಳಲು ಬಯಸುತ್ತೇನೆʼ ಎಂದು ಘೋಷಿಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/for-narendra-modi-to-be-pm-in-2024-yogi-adityanath-as-up-cm-a-must-in-2022-amit-shah-879704.html" itemprop="url">2024ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗಲು 2022ರಲ್ಲಿ ಯೋಗಿ ಸಿಎಂ ಆಗಬೇಕು: ಅಮಿತ್ ಶಾ</a></p>.<p>ಈ ರ್ಯಾಲಿಯಲ್ಲಿ ಅಂದಾಜು40,000 ಜನರು ಭಾಗವಹಿಸಿದ್ದರು. ಅದರಲ್ಲಿ ನಾಲ್ಕನೇ ಒಂದು ಭಾಗದಷ್ಟು ಮಹಿಳೆಯರಿದ್ದರುಎನ್ನಲಾಗಿದೆ.</p>.<p>ʼಜನರು, ಮುಖ್ಯವಾಗಿ ಮಹಿಳೆಯರು ಭರವಸೆಗಳೊಂದಿಗೆ ಕಾಂಗ್ರೆಸ್ನತ್ತ ನೋಡಲಾರಂಭಿಸಿದ್ದಾರೆ. ನಮ್ಮ ಪಕ್ಷವು ಮಹಿಳೆಯರೊಂದಿಗೆ ಮತ್ತು ಅವರ ಧ್ವನಿಯಾಗಿ ನಿಲ್ಲಲಿದೆʼ ಎಂದು ರ್ಯಾಲಿಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತೆ ಸುನಿತಾ ಮಿಶ್ರಾ ಎನ್ನುವವರು ಹೇಳಿದ್ದಾರೆ.</p>.<p>ರಾಜ್ಯದ403ಕ್ಷೇತ್ರಗಳ ಪೈಕಿ ಶೇ.40 ರಷ್ಟು ಸ್ಥಾನಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಕಾಂಗ್ರೆಸ್ ನೀಡಿರುವ ವಾಗ್ದಾನವನ್ನೂಮತದಾರರು ಸ್ವಾಗತಿಸಿದ್ದಾರೆ ಎಂದೂಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>ಗೋರಖಪುರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ನಿರ್ಮಲಾ ಪಾಸ್ವಾನ್, ʼಪಕ್ಷಕ್ಕೆ ಸೇರಿಕೊಳ್ಳಲು ಸಾಕಷ್ಟು ಮಹಿಳೆಯರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಮಹಿಳೆಯರು ಬದಲಾವಣೆಯನ್ನು ತರಲಿದ್ದಾರೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/adityanath-changed-caste-of-king-mihir-bhoj-for-votes-akhilesh-yadav-870200.html" itemprop="url">ಮತಕ್ಕಾಗಿ ರಾಜ ಮಿಹಿರ್ ಭೋಜ್ ಜಾತಿ ಬದಲಿಸಿದ ಯೋಗಿ: ಅಖಿಲೇಶ್ ಟೀಕೆ</a></p>.<p>ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಸ್ಮಾರ್ಟ್ಫೋನ್ ವಿತರಣೆ, ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ, ಕುಟುಂಬವೊಂದಕ್ಕೆ ವಾರ್ಷಿಕ ಮೂರು ಅಡುಗೆ ಅನಿಲ ಸಿಲಿಂಡರ್ಗಳ ಉಚಿತ ವಿತರಣೆ, ಉದ್ಯೋಗದಲ್ಲಿ ಲಿಂಗಾಧಾರಿತ ಮೀಸಲಾತಿ ಸೇರಿದಂತೆ ಹಲವು ಭರವಸೆಗಳನ್ನು ಕಾಂಗ್ರೆಸ್ ನೀಡಿದೆ.</p>.<p>ಆದಾಗ್ಯೂ ನಾಯಕತ್ವದ ಬಿಕ್ಕಟ್ಟು ಸೇರಿದಂತೆ ಸಾಕಷ್ಟು ಆಂತರಿಕ ಸಮಸ್ಯೆಗಳನ್ನುಕಾಂಗ್ರೆಸ್ ಎದುರಿಸುತ್ತಿದೆ.</p>.<p>ರಾಜ್ಯ ನಾಯಕರು ಕೇವಲಹೊಗಳುಭಟ್ಟರ ಮಾತುಗಳನ್ನಷ್ಟೇ ಕೇಳುತ್ತಿದ್ದಾರೆ. ಪಕ್ಷದಲ್ಲಿ ಇಂತಹವರ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಎಂಬಂತೆ ಹೆಚ್ಚಾಗಿದೆʼ ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದ ಗೋರಖಪುರ ವಿಧಾನಸಭೆಕ್ಷೇತ್ರದ ಮಾಜಿ ಅಭ್ಯರ್ಥಿ ರಾಣಾ ರಾಹುಲ್ ಸಿಂಗ್ ಆರೋಪಿಸಿದ್ದರು.</p>.<p>ʼತಳಮಟ್ಟದಿಂದ ಶ್ರಮಿಸಿದ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗುತ್ತಿದೆʼ ಎಂದೂ ದೂರಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/world-news/himachala-pradesh-bypoll-elections-congress-bjp-politics-880858.html" itemprop="url">ಹಿಮಾಚಲ ಪ್ರದೇಶ: 1 ಲೋಕಸಭೆ, 3 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು</a></p>.<p>ಈ ಬಗ್ಗೆ ಪ್ರಿಯಾಂಕಾ ವಾದ್ರಾ ನಿಕಟವರ್ತಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್ ಸಂಘಟನಾ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.</p>.<p>ʼಬದಲಾವಣೆ ಸುಲಭವಲ್ಲ. ಆದರೆ, ಬದಲಾವಣೆ ಒಳ್ಳೆಯದು. ಈ ಬದಲಾವಣೆಗಳು ದೀರ್ಘಾವಧಿವರೆಗೆ ಕೆಲಸ ಮಾಡಲಿವೆʼ ಎಂದುಸುಪ್ರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p><strong>ಕಾಂಗ್ರೆಸ್ಗೆ ಕೇವಲ 4-7 ಸ್ಥಾನ: ಸಿ-ವೋಟರ್</strong><br />ಸಿ-ವೋಟರ್ ಇತ್ತೀಚೆಗೆ ನಡೆಸಿದ ಸಮೀಕ್ಷೆಪ್ರಕಾರ, ರಾಜ್ಯದ403 ಸ್ಥಾನಗಳಲ್ಲಿ240ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿಯು ಸುಲಭವಾಗಿ ಜಯಿಸಲಿದೆ. ಕಾಂಗ್ರೆಸ್ ಮೂರರಿಂದ ಏಳು ಸ್ಥಾನಗಳನ್ನಷ್ಟೇ ಗೆಲ್ಲಬಹುದು. ಇದರೊಂದಿಗೆ ಜಯಗಳಿಕೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ ಎನ್ನಲಾಗಿದೆ.</p>.<p>2017ರ ಚುನಾವಣೆಯಲ್ಲಿ114 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ7 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ312 ಸ್ಥಾನಗಳನ್ನು ಜಯಿಸಿ ಅಧಿಕಾರಕ್ಕೇರಿತ್ತು.</p>.<p><strong>ಇವನ್ನೂ ಓದಿ<br />*</strong><a href="https://cms.prajavani.net/india-news/uttar-pradesh-polls-priyanka-gandhi-promises-free-medical-treatment-up-to-rs-10-lakh-878426.html" itemprop="url">ಉ.ಪ್ರದೇಶ ಚುನಾವಣೆ | ₹10 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ: ಪ್ರಿಯಾಂಕಾ </a><br /><strong>*</strong><a href="https://www.prajavani.net/stories/national/gorakhpur-tough-task-again-bjp-637302.html " target="_blank">ಗೋರಖಪುರ: ಬಿಜೆಪಿಗೆ ಕಠಿಣ ಹಾದಿ </a><br />*<a href="https://cms.prajavani.net/india-news/modi-govt-has-created-records-in-giving-trouble-to-people-priyanka-gandhi-on-fuel-prices-878168.html" itemprop="url">ಜನರಿಗೆ ಕಷ್ಟ ಕೊಡುವುದರಲ್ಲಿ ಮೋದಿ ಸರ್ಕಾರದಿಂದ ದಾಖಲೆ: ಪ್ರಿಯಾಂಕಾ ಗಾಂಧಿ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>