ಪ್ಲಾಟ್ಫಾರ್ಮ್ ಮೇಲೆ ನಿಂತಿದ್ದ ರೈಲ್ವೆ ಸಿಬ್ಬಂದಿ ಎಚ್. ಸತೀಶ್ ಕುಮಾರ್ ಎನ್ನುವವರು, ರೈಲು ಬರುವುದಕ್ಕೆ ಕೆಲವೇ ಸೆಕೆಂಡುಗಳು ಇದ್ದಾಗ, ಹಳಿಯಲ್ಲಿ ಪ್ರಯಾಣಿಕ ಸಿಲುಕಿರುವುದನ್ನು ಗಮನಿಸುತ್ತಾರೆ. ತಕ್ಷಣವೇ, ಆತನತ್ತ ಓಡುವ ಸತೀಶ್, ಹಳಿ ಮೇಲೆ ಜಿಗಿದು, ವ್ಯಕ್ತಿಯನ್ನು ಪಕ್ಕಕ್ಕೆ ಎಳೆದೊಯ್ಯುತ್ತಾರೆ. ಇಷ್ಟಾಗುವುದರೊಳಗೆ ರೈಲು ನಿಲ್ದಾಣದಲ್ಲಿ ಹಾದುಹೋಗುತ್ತದೆ.