<p><strong>ಹೈದರಾಬಾದ್:</strong> ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಒವೈಸಿ ವಾಗ್ದಾಳಿ ನಡೆಸಿದ್ದಾರೆ.</p>.<p>'ಅವರು (ಬಿಜೆಪಿ) ಮರುನಾಮಕರಣ ಮಾಡಲು ಬಯಸುತ್ತಿದ್ದಾರೆ. ಎಲ್ಲ ಕಡೆಗಳಲ್ಲೂ ಮರುನಾಮಕರಣ ಮಾಡುತ್ತಿದ್ದಾರೆ. ಹೈದರಾಬಾದ್ಗೆ ಮರುನಾಮಕರಣ ಮಾಡುವವರ ಹೆಸರು ಬದಲಾಗಬಹುದು. ಆದರೆ, ಹೈದರಾಬಾದ್ ಶಾಶ್ವತವಾಗಿ ಉಳಿಯಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಇಲ್ಲಿಗೆ ಬರುತ್ತಾರೆ. ಈ ನಗರದ ಹೆಸರು ಬದಲಿಸುವ ಮಾತಾಡುತ್ತಾರೆ. ಹೆಸರು ಬದಲಿಸುವ ಗುತ್ತಿಗೆಯನ್ನೇನಾದರೂ ಇವರು ಪಡೆದಿದ್ದಾರೆಯೇ?' ಎಂದು ಅವರು ಪ್ರಶ್ನೆ ಮಾಡಿದರು.</p>.<p>'ಫೈಜಾಬಾದ್ ಅಯೋಧ್ಯೆಯಾಗಲು ಸಾಧ್ಯವಾದರೆ, ಅಲಹಾಬಾದ್ ಪ್ರಯಾಗರಾಜ್ ಆಗಬಹುದಾದರೆ, ಹೈದರಾಬಾದ್ ಭಾಗ್ಯನಗರವಾಗಲು ಏಕೆ ಸಾಧ್ಯವಿಲ್ಲ?' ಎಂದು ಹೈದರಾಬಾದ್ ಪಾಲಿಕೆ ಚುನಾವಣೆ ಪ್ರಚಾರದ ವೇಳೆ ಯೋಗಿ ಆದಿತ್ಯನಾಥ್ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಒವೈಸಿ ವಾಗ್ದಾಳಿ ನಡೆಸಿದ್ದಾರೆ.</p>.<p>'ಅವರು (ಬಿಜೆಪಿ) ಮರುನಾಮಕರಣ ಮಾಡಲು ಬಯಸುತ್ತಿದ್ದಾರೆ. ಎಲ್ಲ ಕಡೆಗಳಲ್ಲೂ ಮರುನಾಮಕರಣ ಮಾಡುತ್ತಿದ್ದಾರೆ. ಹೈದರಾಬಾದ್ಗೆ ಮರುನಾಮಕರಣ ಮಾಡುವವರ ಹೆಸರು ಬದಲಾಗಬಹುದು. ಆದರೆ, ಹೈದರಾಬಾದ್ ಶಾಶ್ವತವಾಗಿ ಉಳಿಯಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಇಲ್ಲಿಗೆ ಬರುತ್ತಾರೆ. ಈ ನಗರದ ಹೆಸರು ಬದಲಿಸುವ ಮಾತಾಡುತ್ತಾರೆ. ಹೆಸರು ಬದಲಿಸುವ ಗುತ್ತಿಗೆಯನ್ನೇನಾದರೂ ಇವರು ಪಡೆದಿದ್ದಾರೆಯೇ?' ಎಂದು ಅವರು ಪ್ರಶ್ನೆ ಮಾಡಿದರು.</p>.<p>'ಫೈಜಾಬಾದ್ ಅಯೋಧ್ಯೆಯಾಗಲು ಸಾಧ್ಯವಾದರೆ, ಅಲಹಾಬಾದ್ ಪ್ರಯಾಗರಾಜ್ ಆಗಬಹುದಾದರೆ, ಹೈದರಾಬಾದ್ ಭಾಗ್ಯನಗರವಾಗಲು ಏಕೆ ಸಾಧ್ಯವಿಲ್ಲ?' ಎಂದು ಹೈದರಾಬಾದ್ ಪಾಲಿಕೆ ಚುನಾವಣೆ ಪ್ರಚಾರದ ವೇಳೆ ಯೋಗಿ ಆದಿತ್ಯನಾಥ್ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>