ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಬದಲಿಸುವವರ ಹೆಸರೇ ಬದಲಾಗಲಿದೆ, ಹೈದರಾಬಾದ್‌ ಅಲ್ಲ: ಯೋಗಿಗೆ ಒವೈಸಿ

Last Updated 29 ನವೆಂಬರ್ 2020, 8:05 IST
ಅಕ್ಷರ ಗಾತ್ರ

ಹೈದರಾಬಾದ್‌: ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ವಿರುದ್ಧ ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್‌ ಒವೈಸಿ ವಾಗ್ದಾಳಿ ನಡೆಸಿದ್ದಾರೆ.

'ಅವರು (ಬಿಜೆಪಿ) ಮರುನಾಮಕರಣ ಮಾಡಲು ಬಯಸುತ್ತಿದ್ದಾರೆ. ಎಲ್ಲ ಕಡೆಗಳಲ್ಲೂ ಮರುನಾಮಕರಣ ಮಾಡುತ್ತಿದ್ದಾರೆ. ಹೈದರಾಬಾದ್‌ಗೆ ಮರುನಾಮಕರಣ ಮಾಡುವವರ ಹೆಸರು ಬದಲಾಗಬಹುದು. ಆದರೆ, ಹೈದರಾಬಾದ್ ಶಾಶ್ವತವಾಗಿ ಉಳಿಯಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಇಲ್ಲಿಗೆ ಬರುತ್ತಾರೆ. ಈ ನಗರದ ಹೆಸರು ಬದಲಿಸುವ ಮಾತಾಡುತ್ತಾರೆ. ಹೆಸರು ಬದಲಿಸುವ ಗುತ್ತಿಗೆಯನ್ನೇನಾದರೂ ಇವರು ಪಡೆದಿದ್ದಾರೆಯೇ?' ಎಂದು ಅವರು ಪ್ರಶ್ನೆ ಮಾಡಿದರು.

'ಫೈಜಾಬಾದ್ ಅಯೋಧ್ಯೆಯಾಗಲು ಸಾಧ್ಯವಾದರೆ, ಅಲಹಾಬಾದ್ ಪ್ರಯಾಗರಾಜ್‌ ಆಗಬಹುದಾದರೆ, ಹೈದರಾಬಾದ್ ಭಾಗ್ಯನಗರವಾಗಲು ಏಕೆ ಸಾಧ್ಯವಿಲ್ಲ?' ಎಂದು ಹೈದರಾಬಾದ್‌ ಪಾಲಿಕೆ ಚುನಾವಣೆ ಪ್ರಚಾರದ ವೇಳೆ ಯೋಗಿ ಆದಿತ್ಯನಾಥ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT