ಬೆಂಗಳೂರು: 2022ನೇ ಸಾಲಿನ ಅತ್ಯುತ್ತಮ ತನಿಖೆಗೆ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪದಕ ದೊರೆತಿದೆ.
ಲಕ್ಷ್ಮೀ ಗಣೇಶ್ ಕೆ, ಅಡಿ (ಎಸ್ಪಿ), ವೆಂಕಟಪ್ಪ ನಾಯಕ (ಡಿವೈಎಸ್ಪಿ), ಮೈಸೂರು ರಾಜೇಂದ್ರ ಗೌತಮ್ (ಡಿವೈಎಸ್ಪಿ), ಶಂಕರ ಕಾಳಪ್ಪ ಮಾರಿಹಾಳ್ (ಡಿವೈಎಸ್ಪಿ), ಶಂಕರಗೌಡ ವೀರನಗೌಡ ಪಾಟೀಲ್ (ಡಿವೈಎಸ್ಪಿ) ಗುರುಬಸವರಾಜ ಹೆಚ್ ಹಿರೇಗೌಡರ್ (ಸರ್ಕಲ್ ಪೊಲೀಸ್) ಅವರು ಗೃಹ ಸಚಿವರ ಪದಕ್ಕೆ ಭಾಜನರಾಗಿದ್ದಾರೆ.
ಇವರಷ್ಟೇ ಅಲ್ಲದೇ, ದೇಶದ ವಿವಿಧ ರಾಜ್ಯಗಳ 151 ಪೊಲೀಸ್ ಅಧಿಕಾರಿಗಳಿಗೂ ಗೃಹ ಸಚಿವರ ಪದಕ ಸಿಕ್ಕಿದೆ.