ನವೀನ್ ಗೆ ರಷ್ಯಾ ಪಡೆಯ ಶೆಲ್ ನೇರವಾಗಿ ತಗುಲಿಲ್ಲ. ಬದಲಿಗೆ, ಶೆಲ್ ದಾಳಿಯ ರಭಸಕ್ಕೆ ಸಿಡಿದ ಕಬ್ಬಿಣದ ಚೂರು ಅವರ ತಲೆಗೆ ಬಡಿದಿರುವ ಸಾಧ್ಯತೆ ಇದೆ. ಅವರ ಮೃತದೇಹ ಸುರಕ್ಷಿತವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಹಾಗಾಗಿ, ಸಂರಕ್ಷಿಸಿ ಇಡಲಾಗಿರುವ ಅವರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಲು ಅಗತ್ಯವಿರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾಗಿ ಉದಾಸಿ ಅವರು ಸುದ್ದಿಗಾರರಿಗೆ ತಿಳಿಸಿದರು.