ಬೆಳಿಗ್ಗೆ ಹೊಲಕ್ಕೆ ಬಂದಿದ್ದ ಇಮಾಮ್'ಸಾಬ್ ಮನೆಗೆ ವಾಪಸ್ಸಾಗುವಾಗುವ ವೇಳೆ ಯರಗುಪ್ಪಿ ಹಾಗೂ ಯರಿನಾರಾಯಣಪುರ ಗ್ರಾಮಗಳ ಮಧ್ಯದಲ್ಲಿನ ಬೆಣ್ಣೆಹಳ್ಳಕ್ಕೆ ಕಟ್ಟಿಗೆ ತರಲೆಂದು ಹೋಗಿದ್ದರು. ದಂಡೆಯಲ್ಲಿ ನಿಂತು ಕಟ್ಟಿಗೆ ಆಯುವಾಗ ಕಾಲುಜಾರಿ ಹಳ್ಳದಲ್ಲಿ ಬಿದ್ದಿದ್ದಾರೆ. ನೀರಿನಲ್ಲಿ ತೇಲಿ ಹೋಗುತ್ತಿದ್ದ ಅವರನ್ನು ಯರಗುಪ್ಪಿ ಗ್ರಾಮದ ಇಬ್ಬರು ಹುಡುಗರು ನೋಡಿದ್ದು, ರಕ್ಷಣೆ ಮಾಡಲಾಗದೆ ಅಸಹಾಯಕರಾಗಿ ನಿಂತಿದ್ದರು. ಅದೇ ಮಾರ್ಗವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕರ್ತವ್ಯಕ್ಕಾಗಿ ಬರುತ್ತಿದ್ದ ಪೊಲೀಸ್ ಸಿಬ್ಬಂದಿ ಪ್ರದೀಪ ಅಣ್ಣಿಗೇರಿ ಅವರನ್ನು ತಡೆದ ಹುಡುಗರು ವಿಷಯ ತಿಳಿಸಿದ್ದಾರೆ. ಕೂಡಲೇ ಪ್ರದೀಪ ಯರಗುಪ್ಪಿಯ ಗ್ರಾಮಸ್ಥರಿಗೆ ಕರೆ ಮಾಡಿ ಹಗ್ಗ ತರಸಿಕೊಂಡು, ತಾವು ಸಹ ನೀರಿಗಿಳಿದು ಇಮಾಮ್'ಸಾಬ್ ಅವರನ್ನು ರಕ್ಷಣೆ ಮಾಡಿದ್ದಾರೆ.