ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಂಪರೆಯ ಪ್ರತಿರೋಧದಿಂದಲೇ ಸಾಹಿತ್ಯ ಚಳವಳಿ’

ವಿಮರ್ಶಕ ಎಚ್. ದಂಡಪ್ಪ ಅಭಿಮತ
Last Updated 18 ಆಗಸ್ಟ್ 2021, 4:47 IST
ಅಕ್ಷರ ಗಾತ್ರ

ಬೆಂಗಳೂರು: ‘ಈಗಿನ ಬರಹಗಾರರು ಪರಂಪರೆಯನ್ನು ಅರಿತುಕೊಂಡು ಸಾಹಿತ್ಯ ಸೃಷ್ಟಿಸಬೇಕು. ಪರಂಪರೆಯ ಪ್ರತಿರೋಧದಿಂದಲೇ ಸಾಹಿತ್ಯ ಚಳವಳಿ ಹುಟ್ಟಿರುವುದು’ ಎಂದು ವಿಮರ್ಶಕ ಎಚ್. ದಂಡಪ್ಪ ತಿಳಿಸಿದರು.

ಬಿಎಂಶ್ರೀ ಪ್ರತಿಷ್ಠಾನವು ರುಕ್ಮಿಣಮ್ಮ ಸೀತಾರಾಮರಾವ್ ದತ್ತಿ ಕಾರ್ಯಕ್ರಮದ ಪ್ರಯುಕ್ತ ‌‘ಕನ್ನಡದ ಸಾಹಿತ್ಯದಲ್ಲಿ ಪರಂಪರೆ ಮತ್ತು ಪ್ರತಿಭಟನೆ’ ಎಂಬ ವಿಷಯದ ಮೇಲೆ ಆನ್‌ಲೈನ್ ವೇದಿಕೆಯಲ್ಲಿ ಮಂಗಳವಾರ ಆಯೋಜಿಸಿದ ಉಪನ್ಯಾಸದಲ್ಲಿ ಮಾತನಾಡಿದರು.

‘ಮುನುಷ್ಯ ಕೇಂದ್ರಿತ ವಿಚಾರಗಳು ಪರಂಪರೆಯಾಗಿ ಬೆಳೆಯುತ್ತಾ ಬಂದಿದೆ. ಆದರೆ, ಅದು ಪ್ರತಿರೋಧಗಳಿಂದ ಹೊಸ ಹೊಸ ರೂಪಗಳನ್ನು ಪಡೆದಿದೆ. ಪರಂಪರೆ ಎನ್ನುವುದು ಒಂದು ಕಡೆಯಿಂದ ಮತ್ತೊಂದು ಕಡೆ ನಿರಂತರ ಚಲನಶೀಲತೆಯಿಂದ ಕೂಡಿರುತ್ತದೆ. ಸಂಪ್ರದಾಯವು ಜಡತ್ವವನ್ನು ಹೊಂದಿರುತ್ತದೆ. ಸಾಹಿತ್ಯವೂ ಒಂದು ಪರಂಪರೆ
ಯಾಗಿ ಉಳಿದುಕೊಂಡು ಬಂದಿದೆ’ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಆರ್. ಲಕ್ಷ್ಮೀನಾರಾಯಣ, ಗೌರವ ಕಾರ್ಯದರ್ಶಿ ಬಿ.ಸಿ. ರಾಜಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT