‘ಕಳಪೆ ಕಥೆಗಾರರು ಕಥೆಗಳ ವಿಷಯ ಸೂಚಿಸುತ್ತಾರೆ. ಅದು, ಜಯಂತರ ಕಥೆಗಳಲ್ಲಿ ಇರುವುದಿಲ್ಲ. ಅವರ ಪ್ರತಿ ಕಥೆಯನ್ನು ಓದಿದಾಗಲೂ ಕಾದಂಬರಿ ಓದಿದಂತೆ ಆಗುತ್ತದೆ. ಅವರು ನೀಡುವ ವಿವರಣೆಯಲ್ಲಿ ಪರಿಪೂರ್ಣತೆ ಇರುತ್ತದೆ. ಅವರ ಕಥೆಗಳಲ್ಲಿನ ವಿಷಯವನ್ನು ನಾವೂ ನೋಡಿರುತ್ತೇವೆ. ಆದರೆ, ಅದನ್ನು ಹೇಗೆ ನೋಡಬೇಕು ಎಂದು ಜಯಂತರ ಕಥೆಗಳೇ ಹೇಳುತ್ತವೆ’ ಎಂದು ವಿವರಿಸಿದರು.