‘ಲೋಕಾಯುಕ್ತದ ಅಧಿಕಾರಿಯಾಗಿದ್ದರೂ ಪುರುಷೋತ್ತಮ್, ಮತದಾರರಿಗೆ ಬೆದರಿಕೆ ಹಾಕುವ, ಹಣದ ಆಮಿಷ ಒಡ್ಡುವ ಕೆಲಸ ಮಾಡುತ್ತಿದ್ದಾರೆ. ಮತದಾರರಿಗೆ ಹಂಚಲು ಇವರಿಗೆ ಹಣ ನೀಡಿದವರು ಯಾರು? ಎಂಬುದರ ಕುರಿತು ತನಿಖೆ ನಡೆಸಬೇಕು. ದಾಳಿಮಾಡಿ ಹಣ ವಶಕ್ಕೆ ಪಡೆಯಬೇಕು. ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡು, ಚುನಾವಣಾ ಅಕ್ರಮಗಳನ್ನು ತಡೆಯಬೇಕು. ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ಕಲ್ಪಿಸಬೇಕು’ ಎಂದು ರವಿ ಒತ್ತಾಯಿಸಿದ್ದಾರೆ.