<p><strong>ಬೆಂಗಳೂರು:</strong> ‘ಈ ವರ್ಷದ ಹವಾಮಾನ ಸ್ಥಿತಿಗಳ ಏರುಪೇರಿನಿಂದಾಗಿ ರಾಜ್ಯದಲ್ಲಿ ಈ ಬಾರಿ ಚಳಿಯ ತೀವ್ರತೆ ಹಾಗೂ ಚಳಿಯ ಅವಧಿ ಕಡಿಮೆ ಇರಲಿದೆ’ ಎಂದುಕೃಷಿ ಹವಾಮಾನ ವಿಜ್ಞಾನಿ<br />ಎಂ.ಬಿ.ರಾಜೇಗೌಡ ತಿಳಿಸಿದರು.</p>.<p>‘ರಾಜ್ಯದಲ್ಲಿ ಈ ವರ್ಷದ ಹವಾಮಾನ ಪರಿಸ್ಥಿತಿ ಸಾಮಾನ್ಯ ವರ್ಷಗಳಿಗಿಂತ ಭಿನ್ನ<br />ವಾಗಿದೆ. ಅ.25ರಂದು ಮುಂಗಾರು ಕೊನೆಗೊಂಡಿದ್ದು, ಹಿಂಗಾರು ಆರಂಭಗೊಂಡಿತು. ಇದರಿಂದ ಚಳಿಗಾಲದ ಆರಂಭ ಸುಮಾರು 20 ದಿನಗಳವರೆಗೆ ಮುಂದಕ್ಕೆ ಹೋಯಿತು’ ಎಂದರು.</p>.<p>‘ಡಿಸೆಂಬರ್ ಮೊದಲ ವಾರ ವಾತಾವರಣದಲ್ಲಿ ತಾಪಮಾನ ಇಳಿಕೆ ಆರಂಭವಾಯಿತು. ಇದಕ್ಕೂ ಮುನ್ನ ಸಾಗರದಲ್ಲಿ ಉದ್ಭವಗೊಂಡ ದಟ್ಟವಾದ ಮೋಡಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಸಿದವು. ಈ ಅವಧಿಯಲ್ಲಿ ಈಶಾನ್ಯ ದಿಕ್ಕಿನ ತಂಗಾಳಿಯ ಪ್ರಭಾವವೂ ತಗ್ಗಿ, ರಾಜ್ಯದಲ್ಲಿ ತಾಪಮಾನ ಏರಿಕೆ ಇರಲಿಲ್ಲ. ಡಿ.21ರವರೆಗೆ ಇದೇ ಸ್ಥಿತಿ ಮುಂದುವರಿಯಲಿದ್ದು, ನಂತರ ತಾಪಮಾನ ಏರಲಿದೆ’ ಎಂದು ವಿವರಿಸಿದರು.</p>.<p>‘ಈ ವರ್ಷ ತಾಪಮಾನ ಇಳಿಕೆಯ ಅವಧಿ ಕೇವಲ 18 ದಿನಗಳು. ಇದರಿಂದ ಬಹುತೇಕ ಪ್ರದೇಶಗಳಲ್ಲಿ ತಾಪಮಾನದ ತೀವ್ರತೆ ತನ್ನಕನಿಷ್ಠ ಹಾಗೂ ಗರಿಷ್ಠ ಮಟ್ಟ ತಲುಪುವುದಿಲ್ಲ. ಈ ಎಲ್ಲ ಕಾರಣಗಳಿಂದ ರಾಜ್ಯದಲ್ಲಿ ಚಳಿಯ ತೀವ್ರತೆ ಕಡಿಮೆ ಇರಲಿದೆ’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಈ ವರ್ಷದ ಹವಾಮಾನ ಸ್ಥಿತಿಗಳ ಏರುಪೇರಿನಿಂದಾಗಿ ರಾಜ್ಯದಲ್ಲಿ ಈ ಬಾರಿ ಚಳಿಯ ತೀವ್ರತೆ ಹಾಗೂ ಚಳಿಯ ಅವಧಿ ಕಡಿಮೆ ಇರಲಿದೆ’ ಎಂದುಕೃಷಿ ಹವಾಮಾನ ವಿಜ್ಞಾನಿ<br />ಎಂ.ಬಿ.ರಾಜೇಗೌಡ ತಿಳಿಸಿದರು.</p>.<p>‘ರಾಜ್ಯದಲ್ಲಿ ಈ ವರ್ಷದ ಹವಾಮಾನ ಪರಿಸ್ಥಿತಿ ಸಾಮಾನ್ಯ ವರ್ಷಗಳಿಗಿಂತ ಭಿನ್ನ<br />ವಾಗಿದೆ. ಅ.25ರಂದು ಮುಂಗಾರು ಕೊನೆಗೊಂಡಿದ್ದು, ಹಿಂಗಾರು ಆರಂಭಗೊಂಡಿತು. ಇದರಿಂದ ಚಳಿಗಾಲದ ಆರಂಭ ಸುಮಾರು 20 ದಿನಗಳವರೆಗೆ ಮುಂದಕ್ಕೆ ಹೋಯಿತು’ ಎಂದರು.</p>.<p>‘ಡಿಸೆಂಬರ್ ಮೊದಲ ವಾರ ವಾತಾವರಣದಲ್ಲಿ ತಾಪಮಾನ ಇಳಿಕೆ ಆರಂಭವಾಯಿತು. ಇದಕ್ಕೂ ಮುನ್ನ ಸಾಗರದಲ್ಲಿ ಉದ್ಭವಗೊಂಡ ದಟ್ಟವಾದ ಮೋಡಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಸಿದವು. ಈ ಅವಧಿಯಲ್ಲಿ ಈಶಾನ್ಯ ದಿಕ್ಕಿನ ತಂಗಾಳಿಯ ಪ್ರಭಾವವೂ ತಗ್ಗಿ, ರಾಜ್ಯದಲ್ಲಿ ತಾಪಮಾನ ಏರಿಕೆ ಇರಲಿಲ್ಲ. ಡಿ.21ರವರೆಗೆ ಇದೇ ಸ್ಥಿತಿ ಮುಂದುವರಿಯಲಿದ್ದು, ನಂತರ ತಾಪಮಾನ ಏರಲಿದೆ’ ಎಂದು ವಿವರಿಸಿದರು.</p>.<p>‘ಈ ವರ್ಷ ತಾಪಮಾನ ಇಳಿಕೆಯ ಅವಧಿ ಕೇವಲ 18 ದಿನಗಳು. ಇದರಿಂದ ಬಹುತೇಕ ಪ್ರದೇಶಗಳಲ್ಲಿ ತಾಪಮಾನದ ತೀವ್ರತೆ ತನ್ನಕನಿಷ್ಠ ಹಾಗೂ ಗರಿಷ್ಠ ಮಟ್ಟ ತಲುಪುವುದಿಲ್ಲ. ಈ ಎಲ್ಲ ಕಾರಣಗಳಿಂದ ರಾಜ್ಯದಲ್ಲಿ ಚಳಿಯ ತೀವ್ರತೆ ಕಡಿಮೆ ಇರಲಿದೆ’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>