‘ಸಂತ್ರಸ್ತೆಯನ್ನು ಹಲವು ಬಾರಿ ವಿಚಾರಣೆ ನಡೆಸಿರುವ ತನಿಖಾಧಿಕಾರಿಗಳು ಆರೋಪಿಯ ವಿಚಾರಣೆಗೆ ವಿನಾಯಿತಿ ನೀಡಿದಂತಿದೆ. ‘ವಿಚಾರಣೆಗೆ ಬರಬೇಕಿದ್ದ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದು, ಗೋಕಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಸಚಿವ ಬೈರತಿ ಬಸವರಾಜು ಹೇಳುತ್ತಾರೆ. ಅಲ್ಲದೇ, ರಮೇಶ ಅವರಿಗೆ ಆರೋಗ್ಯ ಸಚಿವ ಕೆ.ಸುಧಾಕರ್ ಸ್ನೇಹಿತರಾಗಿದ್ದು, ಅವರ ಪ್ರಭಾವ ಬಳಸಿ, ಆಸ್ಪತ್ರೆ ಸಿಬ್ಬಂದಿ ಮೇಲೆ ಒತ್ತಡ ಹೇರಿ, ಕೊರೊನಾ ಪಾಸಿಟಿವ್ ನಕಲಿ ವರದಿ ಹಾಗೂ ಐಸಿಯುನಲ್ಲಿ ಚಿಕಿತ್ಸೆಯ ನಾಟಕ ಆಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.