ನಾಡಿನ ಯುವಕತೆಗಾರರನ್ನು ಗುರುತಿಸುವ ಈ ಸ್ಪರ್ಧೆಗೆ ನೂರಕ್ಕೂಹೆಚ್ಚು ಹಸ್ತಪ್ರತಿಗಳು ಬಂದಿದ್ದವು. ಕತೆಗಾರರಿಗೆ ₹ 30 ಸಾವಿರ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡಲಾಗುತ್ತದೆ.ಬಹುಮಾನಿತ ಹಸ್ತಪ್ರತಿಯ ಪುಸ್ತಕವನ್ನು ಅಕ್ಟೋಬರ್ ತಿಂಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.