‘ಗಲಭೆ ಸಂಚಿನಲ್ಲಿ ಪುಲಿಕೇಶಿನಗರದ ನಿವಾಸಿ ಸಮೀವುದ್ದೀನ್ (37) ಸಹ ಭಾಗಿಯಾಗಿದ್ದ. ಎಸ್ಡಿಪಿಐಯ ಮುಜಾಮ್ಮಿಲ್ ಪಾಷಾ ಜೊತೆ ಸೇರಿ ಆತ ಗಲಭೆ ಸೃಷ್ಟಿಸಿದ್ದ. ‘ಅಲ್ ಹಿಂದ್’ ಸಂಘಟನೆ ಜೊತೆ ಒಡನಾಟ ಹೊಂದಿರುವ ಸಮೀವುದ್ದೀನ್, ಬಿಜೆಪಿ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳ ಜೊತೆ ಸಂಪರ್ಕದಲ್ಲಿದ್ದ. ಆತನನ್ನು ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.